ಉಚ್ಚಿಲ ಉರೂಸ್-ಧಾರ್ಮಿಕ ಕಾರ್ಯಕ್ರಮ ಸಮಾಪನ
ಮಂಗಳೂರು, ಎ.8: ಸೋಮೇಶ್ವರ ಉಚ್ಚಿಲ 407 ಜುಮಾ ಮಸೀದಿಯ ವತಿಯಿಂದ ಅಸೈಯದ್ ಶರೀಫ್ ಅಲ್ ಅರಬಿ ವಲಿಯುಲ್ಲಾಹಿ ಅವರ ಉರೂಸ್ ನೇರ್ಚೆ ಹಾಗೂ ಧಾರ್ಮಿಕ ಕಾರ್ಯಕ್ರಮ ಸಮಾಪನವು ರವಿವಾರ ಜರುಗಿತು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಅಸೈಯದ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಮಾತನಾಡಿದರು. ಯಾಸೀನ್ ಜೌಹರಿ ಕೊಲ್ಲಂ ಮುಖ್ಯ ಭಾಷಣಗೈದರು. ಮಸೀದಿಯ ಮುದರ್ರಿಸ್ ಅಲ್ಹಾಜ್ ಎಂ.ಪಿ. ಇಬ್ರಾಹಿಮುಲ್ ಫೈಝಿ ಉದ್ಯಾವರ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಎಂ.ಎ.ಖಾಸಿಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಕತ್ತುಲ್ಲಾಹ್ ಫೈಝಿ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡು, ಉರೂಸ್ ಸಮಿತಿಯ ಕಾರ್ಯಾಧ್ಯಕ್ಷ ಅಧ್ಯಕ್ಷ ಪಿ.ಎ.ಅಬ್ಬಾಸ್ ಹಾಜಿ ಪೆರಿಬೈಲ್, ಕಾರ್ಯಾಧ್ಯಕ್ಷ ಅಬ್ದುಸ್ಸಲಾಂ ಯು., ಅಜ್ಜಿನಡ್ಕ ಮಸೀದಿಯ ಖತೀಬ್ ಬಶೀರ್ ರಹ್ಮಾನಿ, ಅಧ್ಯಕ್ಷ ಸುಲೈಮಾನ್ ಹಾಜಿ, ಕೋಟೆಕಾರ್ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ, ಫೈಝಲ್ ಬಿ.ಎಸ್.ಎಂ., ಫಲಾಹ್ ಸಂಸ್ಥೆಯ ಮಾಜಿ ಅಧ್ಯಕ್ಷ ಯು.ಅಬೂಬಕರ್ ಹಾಜಿ, ಸುಲೈಮಾನ್ ಹಾಜಿ, ಕೆ.ಸಿ.ರೋಡು ಮಸೀದಿಯ ಅಧ್ಯಕ್ಷ ಅಬ್ಬಾಸ್ ಕೊಳಂಗೆರೆ, ಯು.ಎನ್.ಅಬ್ದುಲ್ಲಾ ಹಾಜಿ ಉಪಸ್ಥಿತರಿದ್ದರು.
ಸಹ ಮುದರ್ರಿಸ್ ಜಅ್ಫರ್ ಸಖಾಫಿ ಸ್ವಾಗತಿಸಿದರು. ಉಚ್ಚಿಲ ಮಸೀದಿಯ ಉಪಾಧ್ಯಕ್ಷ ಯು.ಸಿ.ಎ.ಅಬ್ದುಲ್ ಮಜೀದ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಎಂ.ಅಬ್ಬಾಸ್ ವಂದಿಸಿದರು. ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.