ಈ ಬಾರಿ ಕಾಂಗ್ರೆಸ್ಗೆ ಅಭೂತಪೂರ್ವ ಬೆಂಬಲ: ಮಿಥುನ್ ರೈ
ಕೊಣಾಜೆ, ಎ.7: ಕೇಂದ್ರ ಸರಕಾರ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸಿದ್ದು, ಇದೀಗ ಮತ್ತೆ ಸುಳ್ಳು ಭರವಸೆಗಳನ್ನು ಕೇಳಲು ಜನರು ಸಿದ್ಧರಿಲ್ಲ. ಈ ಬಾರಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಲಿದ್ದು, ದ.ಕ. ಜಿಲ್ಲೆಯಲ್ಲೂ ಜನರು ಕಾಂಗ್ರೆಸನ್ನು ಬೆಂಬಲಿಸಲಿದ್ದಾರೆ ಎಂದು ಮಿಥುನ್ ರೈ ಹೇಳಿದ್ದಾರೆ.
ಅವರು ಶನಿವಾರ ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಬಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬೆಂಗಳೂರಿನ ಶಾಸಕ ಎನ್. ಎ.ಹ್ಯಾರಿಸ್, ಮುಖಂಡರಾದ ರಾಜ್ ಗೋಪಾಲ್ ರೈ, ಕಣಚೂರು ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಮುಹಮ್ಮದ್ ಮುಸ್ತಫ, ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕೋಡಿಜಾಲ್, ಜಬ್ಬಾರ್ ಬೋಳಿಯಾರ್, ಸಲೀಂ ಮೇಘ, ಇಕ್ಬಾಲ್ ಸಾಮಣಿಗೆ, ಸಿದ್ದೀಕ್ ಪಾರೆ, ನಾಸಿರ್ ಸಾಮಣಿಗೆ, ತಾಪಂ ಅಧ್ಯಕ್ಷ ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಮಿಥುನ್ ರೈ ಮುಖಂಡರೊಂದಿಗೆ ಮುನ್ನೂರು, ಕೊಣಾಜೆ, ಮಂಜನಾಡಿ, ಮೊಂಟೆಪದವು, ಕಿನ್ಯ, ತಲಪಾಡಿ, ಕೋಟೆಕಾರ್, ಬೆಳ್ಮ, ಸೋಮೇಶ್ವರ, ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಸಂಚರಿಸಿ ಮತ ಯಾಚನೆಗೈದರು.