ಕಕ್ಕಿಂಜೆ: ಎಸ್ಡಿಪಿಐ ವತಿಯಿಂದ ಪ್ರಚಾರ ಸಭೆ
ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರೆಡಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಲೋಕಸಭಾ ಅಭ್ಯರ್ಥಿಯ ಪ್ರಚಾರ ಸಭೆ ಕಕ್ಕಿಂಜೆಯಲ್ಲಿ ನಡೆಯಿತು.
ಪ್ರಚಾರ ಸಬೆಯ ಅಧ್ಯಕ್ಷತೆಯನ್ನುಎಸ್ಡಿಪಿಐ ಬೆಳ್ತಂಗಡಿ ವಿಧಾನಸಭೆಯ ಅಧ್ಯಕ್ಷ ನವಾಝ್ ಶರೀಫ್ಕಟ್ಟೆ ವಹಿಸಿದ್ದರು. ಎಸ್ಡಿಪಿಐ ಲೋಕಸಭಾ ಅಭ್ಯರ್ಥಿ ಇಲ್ಯಾಸ್ ಮಹಮ್ಮದ್ ತುಂಬೆ, ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಚಾರ್ಮಾಡಿ ಗ್ರಾಮ ಪಂಚಾಯಿತ್ ಸದಸ್ಯ ಸಿದ್ದೀಕ್ ಯು.ಬಿ, ತಾಲೂಕು ಸಮಿತಿ ಸದಸ್ಯ ಫಝಲ್ ರಹಿಮಾನ್, ಅಶ್ರಫ್ಕಟ್ಟೆ ಉಪಸ್ಥಿತರಿದ್ದರು.
ಶಾಹುಲ್ ಸ್ವಾಗತಿಸಿ, ನಿಸಾರ್ ಕಾರ್ಯಕ್ರಮ ನಿರೂಪಿಸಿ, ರಹೀಂ ವಂದಿಸಿದರು.
Next Story