ವಿಷ ಸೇವಿಸಿ ಆತ್ಮಹತ್ಯೆ
ಬ್ರಹ್ಮಾವರ, ಎ.9: ವೈಯಕ್ತಿಕ ಕಾರಣದಿಂದ ಮನನೊಂದು ಮಾ.29ರಂದು ಬಾರಕೂರಿನ ಈಶ್ವರ ದೇವಸ್ಥಾನದ ಬಳಿ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಂದಾಡಿ ಗ್ರಾಮದ ಬೇಳೂರುಜೆಡ್ಡು ನಿವಾಸಿ ಚರಣ್ರಾಜ್ ಎಂಬವರ ಮಗಳು ಕಾವ್ಯ (17) ಎಂಬವರು ಎ.8ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story