ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿ: ಸಚಿವ ನಾಡಗೌಡ
ಉಡುಪಿ, ಎ.10: ಕಳೆದ ಐದು ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ. ಸಂವಿಧಾನಕ್ಕೆ ಧಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ರಾಜ್ಯ ಮೀನುಗಾರಿಕೆ ಮತ್ತು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಈಗ ಅಪಾಯದಲ್ಲಿದೆ, ಇದನ್ನು ತಡೆಯಲು ದೇಶದ 20ಕ್ಕೂ ಅಧಿಕ ಜಾತ್ಯತೀತ ಪಕ್ಷಗಳು ಈ ಚುನಾವಣೆಯ ಸಂದರ್ಭದಲ್ಲಿ ಒಟ್ಟುಗೂಡಿವೆ ಎಂದರು.
ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ ಏನು ಸಾಧನೆ ಮಾಡಿದೆ ಎಂಬುದು ಎಲ್ಲೂ ಚರ್ಚೆಯೇ ಆಗುತ್ತಿಲ್ಲ. 2014ರಲ್ಲಿ ಚಾಯ್ ವಾಲಾ ಹೆಸರಲ್ಲಿ, ಈ ಬಾರಿ ಚೌಕಿದಾರ್ ಹೆಸರಿನಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದವರು ನುಡಿದರು.
ಕೇಂದ್ರ ಸರಕಾರ ಐದು ವರ್ಷಗಳ ಹಿಂದೆ ನೀಡಿದ ಪ್ರಣಾಳಿಕೆಯಲ್ಲಿ ನೀಡಿದ ಎಷ್ಟು ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಈ ನಿಟ್ಟಿನಲ್ಲಿ ಅದರ ಸಾಧನೆಗಳೇನು ಎಂಬ ವಿಷಯದ ಬಗ್ಗೆ ಚರ್ಚೆಯೇ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಕೇವಲ ಚೌಕಿದಾರ ಶಬ್ದವನ್ನು ದೊಡ್ಡ ಬಂಡವಾಳ ವಾಗಿಸಿ ಈ ಬಾರಿಯ ಚುನಾವಣೆಯನ್ನು ಗೆಲ್ಲುವ ಪ್ರಯತ್ನ ನಡೆಯುತ್ತಿದೆ ಎಂದವರು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ, ತಮ್ಮ ಸಾಧನೆ ಹಾಗೂ ಅಭಿವೃದ್ಧಿಯ ಬಗ್ಗೆ ಚರ್ಚಿಸದೇ, ಕೇವಲ ಭಾವನಾತ್ಮಕವಾದ ವಿಷಯಗಳನ್ನು ಚುನಾವಣೆಯಲ್ಲಿ ಬಳಸಿಕೊಂಡು ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ನಾಡಗೌಡ ನುಡಿದರು.
ಸ್ವತಹ ನರೇಂದ್ರ ಮೋದಿ ಅವರು ಹಿಂದುತ್ವದ ಪ್ರಯೋಗಕ್ಕೂ ಈ ಬಾರಿ ಇಳಿದಿದ್ದಾರೆ. ಪ್ರಧಾನಿ ಪಟ್ಟದಲ್ಲಿರುವ ವ್ಯಕ್ತಿಗೆ ಇದು ಖಂಡಿತ ಶೋಭೆ ತರು ವಂತದ್ದಲ್ಲ. ಬಹುತ್ವದ ಈ ದೇಶದಲ್ಲಿ ಎಲ್ಲಾ ಜಾತಿ, ಧರ್ಮ, ಪಂಥ, ಸಂಸ್ಕೃತಿಯ ಜನರನ್ನು ಪ್ರಧಾನಿ ಒಟ್ಟಿಗೆ ಕರೆದೊಯ್ಯಬೇಕೇ ಹೊರತು, ಒಂದು ಸಮುದಾಯದ ಪರವಾಗಿ ಹೇಳಿಕೆ ಸರಿ ಅಲ್ಲ ಎಂದರು.
ಸ್ವತಹ ನರೇಂದ್ರ ಮೋದಿ ಅವರು ಹಿಂದುತ್ವದ ಪ್ರಯೋಗಕ್ಕೂ ಈ ಬಾರಿ ಇಳಿದಿದ್ದಾರೆ. ಪ್ರಾನಿಪಟ್ಟದಲ್ಲಿರುವವ್ಯಕ್ತಿಗೆಇದುಖಂಡಿತಶೋೆ ತರು ವಂತದ್ದಲ್ಲ. ಬಹುತ್ವದ ಈ ದೇಶದಲ್ಲಿ ಎಲ್ಲಾ ಜಾತಿ, ರ್ಮ,ಪಂಥ,ಸಂಸ್ಕೃತಿಯಜನರನ್ನುಪ್ರಾನಿ ಒಟ್ಟಿಗೆ ಕರೆದೊಯ್ಯಬೇಕೇ ಹೊರತು, ಒಂದು ಸಮುದಾಯದ ಪರವಾಗಿ ಹೇಳಿಕೆ ಸರಿ ಅಲ್ಲ ಎಂದರು. ಕಳೆದ ಬಾರಿ ಚುನಾವಣೆಯ ಪ್ರಣಾಳಿಕೆಯಲ್ಲಿ ಯಾವ ಆಶ್ವಾಸನೆಯನ್ನೂ ಪ್ರಧಾನಿ ಮೋದಿ ಈಡೇರಿಸಿಲ್ಲ. ರೈತರಿಗೆ ನೀಡಿದ ಆಶ್ವಾಸನೆ, ಕಪ್ಪುಹಣ ತರುವ ವಿಷಯ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ, ಆದಾಯ ದಪ್ಪಟ್ಟು ಗೊಳಿಸುವ ಭರವಸೆಗಳ್ಯಾವುದೂ ಈಡೇರಿಲ್ಲ. ಕೇವಲ ಭಾಷಣಗಳಿಂದ ಯಾರ ಆದಾಯವೂ ಹೆಚ್ಚಾಗಲ್ಲ ಎಂದು ಅವರು ನುಡಿದರು.
ದೇಶದ ಜನ ಇಂದು ಖಂಡಿತ ಮೋದಿ ಅವರ ಕಳೆದ ಐದು ವರ್ಷಗಳ ಸಾಧನೆಯನ್ನು ಪರಾಮರ್ಶೆ ನಡೆಸುತಿದ್ದಾರೆ. ನಾವು ಸಾಧನೆಗಳ ಮೂಲಕ ಜನರನ್ನು ಒಲಿಸಿಕೊಂಡರೆ, ಅವರು ಕೇವಲ ಭಾವನಾತ್ಮಕ ವಿಷಯಗಳೊಂದಿಗೆ ಜನರ ಬಳಿ ಹೋಗುತಿದ್ದಾರೆ. ಯಾರು ಗೆಲ್ಲುತ್ತಾರೋ ನೋಡೊಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ನಾಯಕ ಯು.ಆರ್.ಸಭಾಪತಿ, ಮಹಾಬಲ ಕುಂದರ್, ಜೆಡಿಎಸ್ ನಾಯಕರಾದ ಯೋಗೀಶ್ ಶೆಟ್ಟಿ, ಹುಸೇನ್ ಹೈಕಾಡಿ, ರೋಹಿತ್ ಕರಂಬಳ್ಳಿ, ರವಿರಾಜ್, ದಿಲ್ಲೇಶ್ ಶೆಟ್ಟಿ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.