ಗಮಕ ಎಂದಿಗೂ ನಶಿುವ ಕಲೆಯಲ್ಲ: ಗಮಕಿ ಗಂಗಮ್ಮ
ಗಂಗಮ್ಮ ಕೇಶವಮೂರ್ತಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ
ಉಡುಪಿ, ಎ.10: ಗಮಕ ಕಲೆ ಎಂದಿಗೂ ನಶಿಸಿ ಹೋಗಲ್ಲ. ಆದರೆ ಯುವಕರು ಮತ್ತು ಹಿರಿಯರು ಒಟ್ಟಿಗೆ ಕೈಜೋಡಿಸಿದಾಗ ಮಾತ್ರವೇ ಗಮಕ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಹಿರಿಯ ಗಮಕಿ ಗಂಮ್ಮ ಕೇಶವ ಮೂರ್ತಿ ಹೇಳಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಆಂಗ್ಲ ಭಾಷೆಯ ಪ್ರಭಾವದಿಂದ ಇಂದಿನ ಯುವಜನತೆಯಲ್ಲಿ ಕನ್ನಡ ಭಾಷೆಯ ಶುದ್ಧತೆ ಇಲ್ಲವಾಗಿದೆ. ಇದರ ಪರಿಣಾಮವಾಗಿ ಗಮಕ ಕಲೆ ಬೆಳೆಸು ವುದು ತುಂಬಾ ಕಷ್ಟವಾಗುತ್ತಿದೆ. ಆದುದರಿಂದ ಗಮಕ ಕಲಿತವರು ಅದನ್ನು ಉಳಿಸಲು ಮುಂದೆ ಬರಬೇಕು ಎಂದರು.
ಅಭಿನಂದನಾ ಭಾಷಣ ಮಾಡಿದ ಸತೀಶ್ ಕುಮಾರ್ ಕೆಮ್ಮಣ್ಣು, ಗಮಕ ಪಠ್ಯ ಪುಸ್ತಕಗಳಲ್ಲಿ ಲಭ್ಯವಿಲ್ಲ. ಆದ್ದರಿಂದ ಯುವಜನತೆ ಗಮಕ ಕಲೆಯಿಂದ ದೂರವಾಗುತ್ತಿದ್ದಾರೆ. ಮಕ್ಕಳ ಮೂಲಕ ಗಮಕವನ್ನು ಬೆಳೆಸುವ ಕಾರ್ಯ ಮಾಡ ಬೇಕು. ಶಾಲಾಕಾಲೇಜುಗಳಲ್ಲಿ ಗಮಕ ಕಲಿಸಲು ಕನ್ನಡ ಸಂಘಗಳು ಮುಂದೆ ಬರಬೇಕು. ಸಂಗೀತ ಶಿಕ್ಷಕರು ಗಮಕವನ್ನು ಪಸರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಣಿಪಾಲ ಅಕಾಡೆಮಿ ಆಪ್ ಜನರಲ್ ಎಜ್ಯು ಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮಾತನಾಡಿ, ಗಮಕದ ಜೊತೆಗೆ ಜೊತೆಗೆ ಸಾಗುವ ವ್ಯಾಖ್ಯಾನದಿಂದ ಗಮಕದ ಅರ್ಥವನ್ನು ಅರಿತು ಕೊಂಡು ಸಂಪೂರ್ಣವಾಗಿ ಆಸ್ವಾದಿಸಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ವಹಿಸಿದ್ದರು. ಪ್ರಶಸ್ತಿ ಸಮಿತಿ ಅಧ್ಯಕ್ಷೆ ಮನೋರಮಾ ಎಂ. ಭಟ್ ಉಪಸ್ಥಿತರಿ ದ್ದರು. ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ.ಎಂ.ಎಲ್.ಸಾಮಗ ವಂದಿಸಿದರು. ಡಾ.ನರಸಿಂಹಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಗಂಗಮ್ಮ ಕೇಶವ ಮೂರ್ತಿ ಹಾಗೂ ವ್ಯಾಖ್ಯಾನಕಾರ ಶಾಂತಾ ಗೋಪಾಲ್ ಅವರಿಂದ ‘ಕುಮಾರವ್ಯಾಸ ಭಾರತದ ಪಾರ್ಥಸಾರಥಿಯಾದ ನೊಲಿದರ್ಜುನಗೆ ಮುರವೈರಿ’ ಗಮಕ ಪ್ರಸ್ತುತಿ ನಡೆಯಿತು.