ಎನ್ಎಂಪಿಟಿ ಟ್ರಸ್ಟಿಯಾಗಿ ಅಬೂಬಕರ್ ಕೃಷ್ಣಾಪುರ ನೇಮಕ
ಮಂಗಳೂರು, ಎ.10: ನವಮಂಗಳೂರು ಬಂದರು ಮಂಡಳಿಯ (ಎನ್ಎಂಪಿಟಿ) ಪುನಾರಚಿತ ಆಡಳಿತ ವರ್ಗಕ್ಕೆ ಅಬೂಬಕರ್ ಕೃಷ್ಣಾಪುರ ಟ್ರಸ್ಟಿಯಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸರಕಾರವು ಬುಧವಾರ ಹೊರಡಿಸಿದ ಆದೇಶದಲ್ಲಿ, ಅಬೂಬಕರ್ ಕೃಷ್ಣಾಪುರ ಅವರು ಮುಂದಿನ ಎರಡು ವರ್ಷಗಳ ಅವಧಿಗೆ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಇಂಟಕ್ ಕಾರ್ಯದರ್ಶಿ ಹಾಗೂ ಕೆನರಾ ಪೋರ್ಟ್ ವರ್ಕರ್ಸ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಅಬೂಬಕರ್ ಕೃಷ್ಣಾಪುರ ಕಳೆದ ಸಾಲಿನಲ್ಲೂ ಎನ್ಎಂಪಿಟಿಯ ಟ್ರಸ್ಟಿಯಾಗಿ ಆಯ್ಕೆಗೊಂಡಿದ್ದರು.
ಕಾರ್ಮಿಕ ಸಂಘಟನೆಗಳ ಮಾನ್ಯತೆಗಾಗಿ ಎನ್ಎಂಪಿಟಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಇಂಟಕ್ ಕಾರ್ಮಿಕ ಸಂಘಟನೆಯು ಅತ್ಯಧಿಕ ಸದಸ್ಯರ ಬೆಂಬಲ ಪಡೆದು ಪ್ರಥಮ ಸ್ಥಾನ ಪಡೆದಿತ್ತು. ಈ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಅಬೂಬಕರ್ ಎನ್ಎಂಪಿಟಿಯಲ್ಲಿ ಕಾರ್ಮಿಕರ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story