ಎ. 12: ಯುನಿವೆಫ್ ಕರ್ನಾಟಕ ವತಿಯಿಂದ ಯುವ ಸಮಾಗಮ ಕಾರ್ಯಕ್ರಮ
ಮಂಗಳೂರು, ಎ. 11: 'ಸಬಲೀಕೃತ ಸದೃಢ ಸಮುದಾಯಕ್ಕಾಗಿ ಸುಶಿಕ್ಷಿತ ಸುರಕ್ಷಿತ ಸಚ್ಚರಿತ ಸಮಾಜಕ್ಕಾಗಿ ಯುನಿವೆಫ್ ಕರ್ನಾಟಕ' ಎಂಬ ಧ್ಯೇಯ ವಾಕ್ಯದೊಂದಿಗೆ ಮಾ. 1 ರಿಂದ ಎ. 7ರ ತನಕ ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿದ್ದ "ಬದಲಾವಣೆಗಾಗಿ ನಾನು" ಸದಸ್ಯತ್ವ ಅಭಿಯಾನದ ಅಂಗವಾಗಿ ಎ.12ರ ಸಂಜೆ 7 ಗಂಟೆಗೆ ಫಳ್ನೀರ್ ಇಂದಿರಾ ಆಸ್ಪತ್ರೆ ಬಳಿಯ ಲುಲುಸೆಂಟರ್ ನಲ್ಲಿರುವ ದಾರುಲ್ ಇಲ್ಮ್ ನಲ್ಲಿ ಸದಸ್ಯರೊಂದಿಗೆ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಸದಸ್ಯರಾಗಿರುವ ಮತ್ತು ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿರುವ ಮಂಗಳೂರು, ಉಳ್ಳಾಲ, ಕುದ್ರೋಳಿ, ಬಂಟ್ವಾಳ, ಕೃಷ್ಣಾಪುರ ಮತ್ತು ಬಜ್ಪೆ ಶಾಖೆಗಳ ಎಲ್ಲಾ ಸದಸ್ಯರೂ ಇದರಲ್ಲಿ ಭಾಗವಹಿಸಬೇಕು ಮತ್ತು ಯುನಿವೆಫ್ ಸಂಘಟನೆಯಲ್ಲಿ ಸಹಮತ ಇರುವ ಹಾಗೂ ಇದರ ಸದಸ್ಯರಾಗಬಯಸುವವರು ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಕಾರ್ಯದರ್ಶಿ ಯು.ಕೆ. ಖಾಲಿದ್ 9845199931 ಇವರನ್ನು ಸಂಪರ್ಕಿಸಬಹುದು.
Next Story