ಮಣಿಪಾಲ: ರೈಲಿನಲ್ಲಿ ಕಳವು
ಮಣಿಪಾಲ, ಎ.11: ಮುಂಬೈ ಥಾಣೆ ನಿಲ್ದಾಣದಿಂದ ಉಡುಪಿಗೆ ಕೊಚ್ಚಿವೆಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತಿದ್ದ ಮುಂಬೈ ಥಾಣೆ ಮೀರಾರೋಡ್ನ ನಿವಾಸಿ ಮೋಹಿನಿ ಕುಮಾರ್ ಎಂಬವರ 131 ಗ್ರಾಂ ಚಿನ್ನಾಭರಣ ಹಾಗೂ 50,000 ರೂ.ನಗದನ್ನು ಎ.9ರ ಸಂಜೆ 5:30ರಿಂದ ಎ.10ರ ಬೆಳಗ್ಗೆ 7 ಗಂಟೆ ನಡುವಿನ ಅವಧಿಯಲ್ಲಿ ಕಳವು ಮಾಡಿರುವುದಾಗಿ ಮೋಹಿನಿ ಅವರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.
Next Story