ಬಿಜೆಪಿಗೆ ಕರಾವಳಿ ಮೀನುಗಾರರ ಸಂಪೂರ್ಣ ಬೆಂಬಲ: ಲಾಲಾಜಿ
ಉಡುಪಿ, ಎ.12: ಹಿಂದುತ್ವವನ್ನೇ ಉಸಿರಾಗಿಸಿಕೊಂಡಿರುವ ಮೀನುಗಾರರು ಹಿಂದುತ್ವದ ಒಂದು ಭಾಗವಾಗಿರುವ ಬಿಜೆಪಿಯನ್ನು ಎಲ್ಲ ಚುನಾವಣೆಯಲ್ಲೂ ಬೆಂಬಲಿಸುತ್ತ ಬಂದಿದ್ದಾರೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದ್ದಾರೆ.
ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾ ಡಿದ ಅವರು, ಈ ಬಾರಿ ಮತ್ತೊಮ್ಮೆ ಮೋದಿ ಎಂಬ ಧ್ಯೇಯವಾಕ್ಯದಂತೆ ಮೀನುಗಾರರು ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡು ಕರಾವಳಿಯ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತಮ್ಮದೇ ಆದ ಕೊಡುಗೆಯನ್ನು ನೀಡಲಿದ್ದಾರೆ ಎಂದರು.
ಕೇಂದ್ರ ಸರಕಾರದಿಂದ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ರಚನೆ, ದೇಶದ ಬಂದರುಗಳ ಅಭಿವೃದ್ಧಿ ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣ, ಮೀನು ಗಾರಿಕಾ ಜಟ್ಟಿಗಳ ಹೂಳೆತ್ತುವ ಕಾಮಗಾರಿಗಳಿಗೆ ವಿಶೇಷ ಅನುದಾನ, ಹೆಜ ಮಾಡಿ ಹಾಗೂ ಕುಳಾಯಿ ಮೀನುಗಾರಿಕಾ ಜಟ್ಟಿಗೆ ಸುಮಾರು 400ಕೋಟಿ ರೂ. ಅನುದಾನಗಳನ್ನು ಒದಗಿಸಿದೆ ಎಂದು ಅವರು ತಿಳಿಸಿದರು.
ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ಸಾ ಸಂಪದನಾ ಯೋಜನೆ ಯಡಿ ಮೀನುಗಾರರಿಗೆ 10ಸಾವಿರ ಕೋಟಿ ರೂ. ಮೀಸಲಿಡುವ ಭರವಸೆ ನೀಡಲಾಗಿದೆ. ಮೀನುಗಾರರ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಲು ಅಕ್ಟ್ ಕಲ್ಚರ್ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಯಶ್ಪಾಲ್ ಸುವರ್ಣ, ಸದಾ ನಂದ ಬಳ್ಕೂರು, ಶಶಿಕಾಂತ್ ಪಡುಬಿದ್ರಿ, ನಯನ ಗಣೇಶ್, ಕೇಸರಿ ಯುವರಾಜ್, ಶರತ್ ಬೈಲಕೆರೆ ಮೊದಲಾದವರು ಉಪಸ್ಥಿತರಿದ್ದರು.