ಪುದು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ನರ್ ಮೀಟಿಂಗ್
ಬಂಟ್ವಾಳ, ಎ13: ಪುದು ಗ್ರಾಮದ ಅಮ್ಮೆಮಾರ್ ವಾರ್ಡಿನಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಗ್ರಾಪಂ ಸದಸ್ಯ ಮುಸ್ತಫ ಅಮ್ಮೆಮಾರ್ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಕಾರ್ನರ್ ಮೀಟಿಂಗ್ ನಡೆಯಿತು.
ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಕಳೆದ 10 ವರ್ಷಗಳಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಸ್ವತಃ ಬಿಜೆಪಿಗರಿಂದಲೆ ಟೀಕೆಗೊಳಗಾದ ಅವರನ್ನು ಮತ್ತೆ ಸಂಸದರಾಗಿ ಆಯ್ಕೆ ಮಾಡುವ ಬದಲು ಸಮರ್ಥ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈಯವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಬಳಿಕ ಮಾಜಿ ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್ ಮಾತನಾಡಿದರು.
ಈ ಸಂದರ್ಭ ಯುವ ನಾಯಕರಾದ ಸಿದ್ದೀಕ್ ಅಮ್ಮೆಮಾರ್, ಬಶೀರ್ ತಂಡೇಲ್, ಅಬ್ದುಸ್ಸಮದ್, ಹುಸೈನ್ ಅಮ್ಮೆಮಾರ್, ಮಮ್ಮಿಯಾಕ, ಹೈದರ್ ಅಮ್ಮೆಮಾರ್, ಜಮಾಲ್ ಅಮ್ಮೆಮಾರ್, ಇರ್ಫಾನ್ ಅಮ್ಮೆಮಾರ್, ಸಲೀಂ ಪುಂಚಮೆ, ಗಫೂರ್ ಪುಂಚಮೆ, ಯುವ ಕಾಂಗ್ರೆಸ್ ಅಧ್ಯಕ್ಷ ನಿಜಾಮ್, ಇಸ್ಮಾಯಿಲ್, ಹಿಶಾಂ ಫರಂಗಿಪೇಟೆ, ಮಜೀದ್ ಪೇರಿಮಾರ್, ಸಾಯಿದ್ ಅಫ್ರೀದ್ ಪುಂಚಮೆ, ರಿಲ್ವಾನ್ ಅಮ್ಮೆಮಾರ್, ಇಮ್ರಾನ್ ಅಮ್ಮೆಮಾರ್, ಹಫೀಝ್ ಅಮ್ಮೆಮಾರ್, ಅಶೂರ್ ಅಮ್ಮೆಮಾರ್ ಉಪಸ್ಥಿತರಿದ್ದರು.