ಕದ್ರಿ ವಾರ್ಡಿನಲ್ಲಿ ಮಿಥುನ್ ಪರ ಐವನ್ ಮತಯಾಚನೆ
ಮಂಗಳೂರು, ಎ.13: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಿಥುನ್ ರೈ ಪರ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಕದ್ರಿ ವಾರ್ಡ್ನಲ್ಲಿ ಮತ ಯಾಚಿಸಿದರು.
ಬಳಿಕ ಮಾತನಾಡಿದ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲನಿ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಬಳಕೆಯಾಗದಿದ್ದಲ್ಲಿ ಮುಂದಿನ ವರ್ಷಕ್ಕೆ ಉಪಯೋಗವಾಗುವಂತೆ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದರಲ್ಲದೆ, ದಲಿತರ ಅಭಿವೃದ್ಧಿಗೆ ಕಾಂಗ್ರೆಸ್ ಸಾಕಷ್ಟು ಪ್ರಯತ್ನ ನಡೆಸಿದ್ದು, ಈ ಚುನಾವಣೆಯಲ್ಲೂ ಮಿಥುನ್ ರೈಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಮಾಜಿ ಕಾರ್ಪೊರೇಟರ್ ಅಶೋಕ್, ವಾರ್ಡ್ ಅಧ್ಯಕ್ಷ ಗೋಪಾಲ್ ಕೃಷ್ಣ ಶೆಟ್ಟಿ, ಸತೀಶ್ ಪೆಂಗಲ್, ಡಿ.ಕೆ. ಹಬಿಬುಲ್ಲ ಕಣ್ಣೂರು, ಬಾಜಿಲ್ ಡಿಸೋಜ, ಆನಂದ್ ಸೋನ್ಸ್, ಗೌರವ್, ಮೋಹನ್ ಕೊಪ್ಪಳ, ಯತಿನ್, ಶಿವಪ್ರಸಾದ್, ಪ್ರಥಮ್, ದೀರಜ್ ದೇವಾಡಿಗ, ವಿನ್ಸೆಂಟ್ ನಂತೂರು, ಅಲೆಕ್ಸ್, ವಲೇರಿಯನ್ ಪಿಂಟೋ ಮತ್ತಿತರರಿದ್ದರು.
Next Story