ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಸಿಪಿಐ ಬೆಂಬಲ
ಮಂಗಳೂರು, ಎ.13: ಸಿಪಿಐ ಮಂಗಳೂರು ತಾಲೂಕು ಸರ್ವಸದಸ್ಯರ ಸಭೆಯು ಶುಕ್ರವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಬಿ.ಕೆ. ಕೃಷ್ಣಪ್ಪ, ತಾಲೂಕು ಕಾರ್ಯದರ್ಶಿ ವಿ.ಎಸ್. ಬೇರಿಂಜ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಡಿ. ಸೋನ್ಸ್ ಮತ್ತು ಕರುಣಾಕರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎ. ಸುರೇಶ್ ಶೆಟ್ಟಿ, ಜಯಶೀಲ ಅಡ್ಯಂತಾಯ, ಶುಬೋದಯ ಆಳ್ವ ಭಾಗವಹಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಿಥುನ್ ರೈಗೆ ಮತ ನೀಡಲು ಮನವಿ ಮಾಡಿದರು.
ಆ ಬಳಿಕ ಪಕ್ಷದ ಸರ್ವಸದಸ್ಯರ ಸಭೆಯು ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚಿಸಿ ಮಿಥುನ್ ರೈಯನ್ನು ಬೆಂಬಲಿಸಲು ನಿರ್ಧರಿಸಿತು.
Next Story