ಮೋದಿಗೆ ಬೆಂಬಲ: ಪುತ್ತೂರಿನಲ್ಲಿ ವೈದ್ಯರ ತಂಡವೊಂದರಿಂದ ಮನವಿ
ಪುತ್ತೂರು, ಎ.13: ದೇಶದಲ್ಲಿ ಹೆಚ್ಚಾಗಿದ್ದ ಭ್ರಷ್ಟಾಚಾರ, ಕಪ್ಪುಹಣ ಮತ್ತು ಯೋತ್ಪಾಧನೆಯನ್ನು ಮಟ್ಟ ಹಾಕಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿ ಸಬೇಕು. ದೇಶದ ಸಮರ್ಥ ನಾಯಕರನ್ನು ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವ ಮೂಲಕ ಆರಿಸಬೇಕು ಎಂದು ಪುತ್ತೂರಿ ವೈದ್ಯರ ತಂಡ ಮನವಿ ಮಾಡಿದೆ.
ಪುತ್ತೂರಿನ ವೈದ್ಯರಾದ ಡಾ.ರಾಘವೇಂದ್ರ ಪ್ರಸಾದ್, ಡಾ.ಗಣೇಶ್ ಪ್ರಸಾದ್ ಮುದ್ರಜೆ ಹಾಗೂ ಡಾ. ಕೃಷ್ಣಪ್ರಸನ್ನ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಆಡಳಿತಾತ್ಮಕ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಂಡ ಮೋದಿ ಸರಕಾರವನ್ನು ನಾವು ಕಣ್ಣಾರೆ ಕಂಡಿದ್ದೇವೆ. ಶಕ್ತಿಗೆ ವಯಸ್ಸಿನ ಹಂಗಿಲ್ಲ ಎಂದು ತೋರಿಸಿಕೊಟ್ಟ ಪ್ರಧಾನಿಯನ್ನು ಕಂಡಿದ್ದೇವೆ. ಇಂದು ದೇಶದ ರಕ್ಷಣೆಗೆ, ಸೈನ್ಯ ವ್ಯವಸ್ಥೆಗೆ ಆದ್ಯತೆ ಕೊಟ್ಟು ಅದನ್ನು ಶಕ್ತಗೊಳಿಸಿದ ಸರಕಾರ ವನ್ನು ಕಂಡಿದ್ದೇವೆ. ಸಾಮಾಜಿಕ, ಆರ್ಥಿಕ, ರಾಜಕೀಯ, ವಿದೇಶಾಂಗ ವ್ಯವಹಾರ ಈ ಎಲ್ಲಾ ನಲೆಗಳಲ್ಲೂ ಆಮೂಲಾಗ್ರ ಪಲ್ಲಟ ತಂದ ಸರಕಾರವನ್ನು ನೋಡಿದ್ದೇವೆ. ಪೆಟ್ರೋಲ್, ಡೀಸೆಲ್ ಕಚ್ಚಾತೈಲಗಳ ವಿದೇಶೀ ಸಾಲವನ್ನು ತೀರಿಸಿದ್ದು, ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಇಳಿಕೆ ಯಾಗಿರುವುದನ್ನು ಗಮನಿಸಿದ್ದೇವೆ. ಹಾಗಾದರೆ ಪ್ರಜ್ಞಾವಂತ ನಾಗರಿಕರೆಲ್ಲರೂ ವಿವೇಚಿಸಿ, ದೇಶದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿಯು ಮೋದಿಯನ್ನು ಪ್ರಧಾನಿಯಾಗಿಸಬೇಕು ಎಂದರು.
ಅಂತರ್ರಾಷ್ಟ್ರೀಯ ಸಂಬಂಧಗಳು ಇಂದು ವಿದೇಶಗಳು ಭಾರತವನ್ನು ಅತ್ಯಂತ ಗೌರವದ ಉನ್ನತ ಸ್ಥಾನದಲ್ಲಿ ನೋಡುವ ಸ್ಥಿತಿ ಒದಗಿಬಂದಿದೆ. ಇದೆಲ್ಲದಕ್ಕೂ ಕಾರಣವಾದ ಸರಕಾರ ಹಾಗೂ ಅದರ ಹಿಂದಿನ ಕರ್ತೃತ್ವ ಶಕ್ತಿ ಹಾಗೂ ಇಚ್ಛಾಶಕ್ತಿಯ ನಾಯಕನನ್ನು ಮತ್ತೊಮ್ಮೆ ದೇಶಕ್ಕೆ ಕೊಟ್ಟು, ಭಾರತವು ತನ್ನ ವೈಭವೋಪೇತವಾದ ಸ್ಥಿತಿಯಲ್ಲಿ ಮತ್ತೆ ಮೆರೆಯುವಂತೆ ಮತದಾರನು ಈ ಬಾರಿ ಮೋದಿಯನ್ನು ಆಯ್ಕೆ ಮಾಡಬೇಕಾಗಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ.ಶಶಿಧರ್ ಕಜೆ, ಡಾ.ಮುರಳೀಕೃಷ್ಣ , ಡಾ. ಸುಧೀರ್ ಟಿ. ಉಪಸ್ಥಿತರಿದ್ದರು.