ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ
ಮಂಗಳೂರು, ಎ.14: ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿಡಾ. ಬಿ.ಆರ್ ಅಂಬೇಡ್ಕರ್ರ 128ನೇ ಜನ್ಮ ದಿನವನ್ನು ರವಿವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಭಾರತೀಯರಿಗೊಂದು ಸ್ವಾಭಿಮಾನದ ಬದುಕು ಕೊಟ್ಟ ಈ ದೇಶದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ರ ಜೀವನ ಸರ್ವ ಕಾಲಕ್ಕೂ ಆಧರಣೀಯವಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸುತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕದ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ದ.ಕ. ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ವಕ್ತಾರ ಹಾಗೂ ಉಪಾಧ್ಯಕ್ಷ ಗಣೇಶ್ ಪೂಜಾರಿ, ದ.ಕ. ಜಿಲ್ಲಾ ಕಾರ್ಯದರ್ಶಿ ಪ್ರೇಮನಾಥ್ ಪಿ.ಬಿ. ಬಳ್ಳಾಲ್ ಬಾಗ್, ಕಚೇರಿ ಕಾರ್ಯದರ್ಶಿಗಳಾದ ನಝೀರ್ ಬಜಾಲ್, ಚೇತನ್ ಬೆಂಗ್ರೆ, ಪ್ರಕಾಶ್ ಬಿ. ಸಾಲ್ಯಾನ್, ರಘುರಾಜ್ ಕದ್ರಿ, ನಾಗವೇಣಿ, ಮಲ್ಲಿಕಾರ್ಜುನ್ ಕೋಡಿಕಲ್, ಜಯಲಕ್ಷ್ಮಿ, ರಜನೀಶ್ ಕಾಪಿಕಾಡ್, ಯೂಸುಫ್ ಉಚ್ಚಿಲ್, ಪೀಯೋಸ್ ಮೋಂತೆರೋ, ಶಬ್ಬೀರ್ ಸಿದ್ದಕಟ್ಟೆ, ಸಿ.ಎಂ. ಮುಸ್ತಫಾ, ಅಬ್ದುಲ್ ಸಲೀಂ, ಹಾತುಲ್ಲಾ ಕ್ವಾಮಿಲ್ ಉಪಸ್ಥಿತರಿದ್ದರು.