ದಲಿತರಿಗೆ ಅಂಬೇಡ್ಕರ್ರವರೇ ಚೌಕಿದಾರ :ಜಯನ್ ಮಲ್ಪೆ
ಉಡುಪಿ, ಎ.14: ಅಸ್ಪ್ಯಶ್ಯರ ನಾನಾ ದಮನ, ದಬ್ಬಾಳಿಕೆಗಳ ವಿರುದ್ಧ ಸಮರ ಘೋಷಿಸಿ, ದಲಿತರಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿ ಉರಿಸಿದ ಅಂಬೇಡ್ಕರ್ ರವರೇ ನಿಜವಾದ ದಲಿತರ ಚೌಕಿದಾರ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ
ಅಂಬೇಡ್ಕರ್ ಯುವಸೇನೆ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನ ದಲ್ಲಿ ರವಿವಾರ ಆಯೋಜಿಸಲಾದ ಸಂವಿಧಾನದ ಶಿಲ್ಪಿಡಾ.ಬಾಬಾ ಸಾಹೇಬ ಅಂಬೇಡ್ಕರ್ರವರ 128ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿ ರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ. ಇಲ್ಲವೇ ನಾವೆಲ್ಲರೂ ನಾಶವಾಗುತ್ತೇವೆ. ಆದ್ದರಿಂದ ಸಂವಿಧಾನವನ್ನು ನಾವು ರಕ್ಷಣೆ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು ಮಾತನಾಡಿ, ಈ ದೇಶದ ರಾಜಕೀಯ ಪಕ್ಷಗಳು ದಲಿತ ಸಮು ದಾಯವನ್ನು ಕೇವಲ ಓಟು ಬ್ಯಾಂಕ್ಗಳಿಗೆ ಮಾತ್ರ ಬಳಸುತ್ತಿದೆ. ಅವರ ನಿಜವಾದ ಅಭಿವೃಧ್ಧಿಗೆ ಪ್ರಾಮಾಣಿಕ ಕೆಲಸ ಮಾಡದಿರುವುದು ದುರಂತ ಎಂದು ಆರೋಪಿಸಿದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಮುಖಂಡ ಹರೀಶ್ ಸಾಲ್ಯಾನ್ ವಹಿಸಿದ್ದರು. ಉದ್ಯಮಿ ಎಸ್.ನಾರಾಯಣ, ದಲಿತ ಮುಖಂಡ ರಾದ ಗಣೇಶ್ ನೆರ್ಗಿ, ಸುಂದರ ಕಪ್ಪೆಟ್ಟು, ಇಂಜೀನಿಯರ್ ರಮೇಶ್ಪಾಲ್ ಮಾತನಾಡಿದರು.
ಅಂಬೇಡ್ಕರ್ ಯುವಸೇನೆಯ ಮಂಜುನಾಥ ಕಪ್ಪೆಟ್ಟು, ಸುರೇಶ್ಪಾಲನ್ ತೊಟ್ಟಂ, ಅನಿಲ್ ಅಂಬಲಪಾಡಿ, ದಿನೇಶ್ ಮೂಡಬೆಟ್ಟು, ಶಶಿಕಲಾ ತೊಟ್ಟಂ, ಸುಕೇಶ್ ನಿಟ್ಟೂರು, ಪ್ರಸಾದ್ ನೆರ್ಗಿ, ಸಂಧ್ಯಾಕೃಷ್ಣ, ನ್ಯಾಯವಾದಿ ಕವಿತಾ, ಸಂತೋಷ ಕಪ್ಪೆಟ್ಟು, ಸುಶೀಲ್ ಕೊಡವೂರು, ಸಂಪತ್ ಗುಜ್ಜರಬೆಟ್ಟು, ಲಕ್ಷ್ಮಣ ನಾಯ್ಕ, ಸುನಂದ ಬೆಂಗಳೂರು ಉಪಸ್ಥಿತರಿದ್ದರು. ಸುಮಿತ್ ನೆರ್ಗಿ ಸ್ವಾಗತಿಸಿ ದರು. ಗೀತಾ ಬಲರಾಮನಗರ ವಂದಿಸಿದರು. ಭಗವಾನ್ ರ್ಗಿ ಕಾರ್ಯ ಕ್ರಮ ನಿರೂಪಿಸಿದರು.