ಎ.16ರಂದು ಮೈತ್ರಿ ಅಭ್ಯರ್ಥಿ ಪ್ರಮೋದ್ರಿಂದ ಪಾದಯಾತ್ರೆ
ಉಡುಪಿ, ಎ.14: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ಪಾದ ಯಾತ್ರೆ ಕಾರ್ಯಕ್ರಮವು ಎ.16ರಂದು ಮಧ್ಯಾಹ್ನ 2.30ಕ್ಕೆ ಮಲ್ಪೆಯಿಂದ ಉಡುಪಿಯವರೆಗೆ ನಡೆಯಲಿದೆ.
ಮಲ್ಪೆ ಏಳೂರು ಮೊಗವೀರ ಮಹಾಸಭಾ ಸಭಾಭವನದ ಬಳಿಯಿಂದ ಪ್ರಮೋದ್ ಪಾದಯಾತ್ರೆಯ ಮೂಲಕ ಮತಯಾಚಿಸುತ್ತ ಕಲ್ಮಾಡಿ, ಆದಿ ಉಡುಪಿ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ರಾಯಲ್ ಗಾರ್ಡನ್ವರೆಗೆ ತೆರಳಲಿ ರುವರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story