ಸೌರಮಾನ ಯುಗಾದಿ ಪ್ರಯುಕ್ತ ಸುವರ್ಣ ರಥೋತ್ಸವ
ಉಡುಪಿ, ಎ.15: ಶ್ರೀಕೃಷ್ಣ ಮಠದಲ್ಲಿ ಸೋಮವಾರ ಸೌರಮಾನ ಯುಗಾದಿ ಪ್ರಯುಕ್ತ ಸುವರ್ಣ ರಥೋತ್ಸವ ನಡೆಯಿತು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಹಾಗೂ ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯ ತೀರ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಮಠದಲ್ಲಿ ಸೌರಮಾನ ಯುಗಾದಿಯ ಪ್ರಯುಕ್ತ ಉಪಸ್ಥಿತರಿದ್ದ ಮಠಾಧೀಶರ ಸಮ್ಮುಖದಲ್ಲಿ ಮಠದ ವಿದ್ವಾಂಸರಾದ ವಾಸುದೇವ ಉಪಾಧ್ಯಾಯರು ವಿಕಾರಿ ನಾಮ ಸಂವತ್ಸ ರದ ಪಂಚಾಂಗ ಪಠಣ ಮಾಡಿದರು.
ಪರ್ಯಾಯ ಮಠದ ಶ್ರೀವಿದ್ಯಾಧೀಶ ತೀರ್ಥರು, ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಸೇರಿದಂತೆ ಉಳಿದೆಲ್ಲಾ ಮಠಾಧೀಶರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story