ರಾಮಚಂದ್ರ ಪಾಟ್ಕರ್ಗೆ ಪಿಎಚ್ಡಿ ಪದವಿ
ಉಡುಪಿ, ಎ.15: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದೈಹಿಕ ಶಿಕ್ಷಣ ನಿರ್ದೇಶಕ ರಾಮ ಚಂದ್ರ ಪಾಟ್ಕರ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಘೋಷಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ ಮಾರ್ಗದರ್ಶನದಲ್ಲಿ ಎಕಾನಾಮಿಕ್ ಸ್ಟೇಟಸ್ ಆ್ಯಂಡ್ ಕಾಸ್ಟ್ ಪಾರ್ಟಿಸಿಪೇಶನ್ ಎಮಾಂಗ್ ದಿ ಟ್ರ್ಯಾಕ್ ಆ್ಯಂಡ್ ಪೀಲ್ಡ್ ಅತ್ಲೇಟಿಸ್ ಆಫ್ ಕರ್ನಾಟಕ ಸ್ಟೇಟ್ ಎಂಬ ವಿಷಯದ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಿದ್ದರು.
Next Story