ಮುಸ್ಲಿಮರಿಗೆ ಮೋದಿಯ ಅನುದಾನ ಬೇಡ: ಸಿ.ಎಂ.ಇಬ್ರಾಹೀಂ
ಮಂಗಳೂರು, ಎ.16: ನರೇಂದ್ರ ಮೋದಿ ಮುಸ್ಲಿಮರಿಗೆ ಏನು ಮಾಡುವುದು ಬೇಡ. ನಮ್ಮ ಹೆಸರನ್ನು ಎತ್ತದಿದ್ದರೆ ಸಾಕು. ಮುಸ್ಲಿಮರಿಗೆ ಮೋದಿಯ ಯಾವುದೇ ಅನುದಾನ ಬೇಡ. ಬೇರೆ ಸಮುದಾಯಗಳ ಜೊತೆ ನಮ್ಮನ್ನು ಬದುಕಲು ಬಿಡಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ಸ್ಟಾರ್ ಕಾಂಪೇನರ್ ಸಿ.ಎಂ. ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹಿಂದೂ-ಮುಸ್ಲಿಮರು ಒಂದಾಗಿ ಬಾಳಬೇಕು. ನಗುತ್ತಾ ನಲಿಯಬೇಕು. ಸಾಮರಸ್ಯದಿಂದ ನಡೆದುಕೊಳ್ಳಬೇಕು. ಯುವ ಮನಸ್ಸುಗಳು ಕೋಮಲವಾಗಿರುತ್ತವೆ. ನಮ್ಮದು ಸಹೋದರತ್ವದ ಭಾವನೆ ಇರುವ ಸಂಸ್ಕೃತಿಯ ನಾಡಾಗಿದೆ. ದ.ಕ. ಜಿಲ್ಲೆಯಲ್ಲಿ ವಿವಿಧ ಧರ್ಮಗಳ ಯುವಕ-ಯುವತಿಯರು ಓಡಾಡುವುದು ಅಪರಾಧ ಎನ್ನುವಂತಹ ಸ್ಥಿತಿಗೆ ಬಂದಿರುವುದು ಅಪಾಯಕಾರಿಯಾಗಿದೆ ಎಂದರು.
ಅನಿವಾಸಿ ಭಾರತೀಯರಲ್ಲಿ ಹೆಚ್ಚಿನ ಸಂಖ್ಯೆಯವರು ದ.ಕ. ಮತ್ತು ಉಡುಪಿ ಜಿಲ್ಲೆಯವರಾಗಿದ್ದಾರೆ. ಕರಾವಳಿ ಮೂಲದ ವ್ಯಕ್ತಿಗಳು ವಿದೇಶದಲ್ಲಿದ್ದಾಗ ಬೇರೆಯವರು ಕರಾವಳಿ ಭಾಗದವರನ್ನು ವ್ಯಂಗ್ಯ ಮಾಡುವಂತಹ ಸ್ಥಿತಿಯಿದೆ. ಎನ್ಆರ್ಐಗಳು ಅವಮಾನಕ್ಕೊಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.