ಅಡಿಕೆ ಮರ ಬಿದ್ದು ಕಾರ್ಮಿಕ ಮೃತ್ಯು
ಕೊಲ್ಲೂರು, ಎ.16: ಕೂಲಿ ಕಾರ್ಮಿಕರೊಬ್ಬರ ತಲೆ ಮೇಲೆ ಅಡಿಕೆ ಮರ ಬಿದ್ದು ಮೃತಪಟ್ಟ ಘಟನೆ ಇಡೂರು ಗ್ರಾಮದ ಕುಕ್ಕಡ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಬಳಿ ಎ.15ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಸುರೇಶ ಶೆಟ್ಟಿ (50) ಎಂದು ಗುರುತಿಸಲಾಗಿದೆ. ದೇವಸ್ಥಾನದ ವಠಾರದ ಬಳಿಯ ಅಡ್ಡ ವಾಲಿದ ತೆಂಗಿನ ಮರ ಬುಡ ಸಮೇತ ಪಕ್ಕದಲ್ಲಿರುವ ಅಡಿಕೆ ಮರದ ಮೇಲೆ ಬಿದಿದ್ದು, ಇದರಿಂದ ಅಡಿಕೆ ಮರ ತುಂಡಾಗಿ ಅಲ್ಲೇ ಬದಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸುರೇಶ ಶೆಟ್ಟಿ ಎಂಬವರ ತಲೆ ಮೇಲೆ ಬಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಸುರೇಶ್ ಶೆಟ್ಟಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತರುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story