‘ಮಿಥುನ್ ರೈಗೆ ಸರ್ವ ಕಾಲೇಜು ವಿದ್ಯಾರ್ಥಿಗಳ ಸಂಘ ಬೆಂಬಲ’
ಮಂಗಳೂರು, ಎ.16: ದ.ಕ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರಿಗೆ ಸರ್ವ ಕಾಲೇಜು ವಿದ್ಯಾರ್ಥಿಗಳ ಸಂಘದ ಬೆಂಬಲವಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ವಕ್ತಾರ ಅಭಿಷೇಕ್ ಉಳ್ಳಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಸರ್ವ ಕಾಲೇಜು ವಿದ್ಯಾರ್ಥಿಗಳ ಸಂಘವು ಒಂದು ಪಕ್ಷದ ಅಭ್ಯರ್ಥಿಪರ ಬೆಂಬಲ ಸೂಚಿಸುತ್ತಿದೆ. ಮಿಥುನ್ ರೈ ಯುವಕನಾಗಿದ್ದು, ಯುವಕರಿಂದಲೇ ಅಭಿವೃದ್ಧಿ ಪಥ ಸಾಗುತ್ತದೆ ಎಂದರು.
ಧರ್ಮ, ಜಾತಿಗಳ ಹೆಸರಲ್ಲಿ ಮತಯಾಚನೆ ಮಾಡುವುದು ಸಾಮಾನ್ಯ. ನಾರಾಯಣ ಗುರು ಧರ್ಮಪರಿಪಾಲನಾ ಸಮಿತಿಗೆ ಸಿದ್ದರಾಮಯ್ಯ ಸರಕಾರವಿದ್ದಾಗ ಸಹಾಯಧನ ನೀಡಲಾಗಿತ್ತು. ಆದರೆ ಅಲ್ಲಿನ ಸ್ಥಳೀಯ ಶಾಸಕರು ಇಲ್ಲಿಯವರೆಗೂ ನಯಾಪೈಸೆ ನೀಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ನಿರಜ್ ಪಾಲ್, ಸೌರಭ್ ಶೆಟ್ಟಿ ಮತ್ತಿತರರಿದ್ದರು.
Next Story