ಮೂಳೆಕ್ಯಾನ್ಸರ್ ಚಿಕಿತ್ಸೆಗಾಗಿ ಆರ್ಥಿಕ ನೆರವಿಗೆ ಮನವಿ
ಮಂಗಳೂರು, ಎ.16: ನಗರದ ಹೊರವಲಯ ಅಡ್ಯಾರ್ನಲ್ಲಿ ವಾಸವಿರುವ ಚಂದ್ರಹಾಸ ಪೂಜಾರಿ ಅವರ ಪುತ್ರ ಅರ್ಪಿತ್ ಸಿ. ಪೂಜಾರಿ 8ನೇ ತರಗತಿ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಂಕನಾಡಿಯಲ್ಲಿ ಕಲಿಯುತ್ತಿದ್ದು, ಈತ ಕಳೆದ ನಾಲ್ಕು ತಿಂಗಳಿಂದ ಕಾಲಿನ ಮೂಳೆ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಮೂಳೆ ಕ್ಯಾನ್ಸರ್ ಚಿಕಿತ್ಸೆಗಾಗಿ ಆರ್ಥಿಕ ನೆರವು ಯಾಚಿಸಿದ್ದಾರೆ.
ವಿದ್ಯಾರ್ಥಿಯು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ. ವೈದ್ಯರು ಕೂಡಲೇ ಈತನಿಗೆ ಕಿಮೋಥೆರಪಿ ಕೊಟ್ಟು ಶಸ್ತ್ರಚಿಕಿತ್ಸೆ ಮಾಡಲು ತಿಳಿಸಿದ್ದಾರೆ. ಇದಕ್ಕೆ ಸುಮಾರು ಆರು ಲಕ್ಷ ರೂ. ವೆಚ್ಚ ತಗುಲಲಿದೆ. ಈ ಬಡ ಕುಟುಂಬ ಅಷ್ಟೊಂದು ಹಣ ಭರಿಸುವಲ್ಲಿ ಅಸಹಾಯಕರಾಗಿದ್ದಾರೆ. ಈ ಕುಟುಂಬಕ್ಕೆ ದಾನಿಗಳು ಆರ್ಥಿಕ ಸಹಾಯ ಮಾಡಿ ಅವರ ಚಿಕಿತ್ಸೆಗೆ ನೆರವಾಗಬಹುದು.
ಖಾತೆ ವಿವರ: ಹೇಮಲತ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಅಡ್ಯಾರು. ಖಾತೆ ಸಂಖ್ಯೆ: 60185077156, ಐಎಫ್ಎಸ್ಇ ಕೋಡ್: MAHB 0001451 ಗೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಚಂದ್ರಹಾಸ ಬೈಲಕೋಡಿ, ಮೊಬೈಲ್ ನಂ. 9986275714ನ್ನು ಸಂಪರ್ಕಿಸಬಹುದಾಗಿದೆ.