ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯನ್ನು ಬೆಂಬಲಿಸಲು ಬಿ.ಜನಾರ್ದನ ಪೂಜಾರಿ ಕರೆ
'ಬಿಜೆಪಿ ಸಂಸದರಿಂದ ಅಭಿವೃದ್ಧಿ ಹಿನ್ನಡೆ;ನೆಮ್ಮದಿಯ ನಾಳೆಗಾಗಿ ಕಾಂಗ್ರೆಸ್ ಬೆಂಬಲಿಸಿ'
ಮಂಗಳೂರು, ಎ.16: ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರ ಅವಧಿಯಲ್ಲಿ ಅಭಿವೃದ್ಧಿಗೆ ಸಂಪೂರ್ಣ ಹಿನ್ನಡೆಯಾಗಿದೆ. ಆದುದರಿಂದ ನಾವೆಲ್ಲರೂ ಸೇರಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಹಾಗೂ ನೆಮ್ಮದಿಯ ನಾಳೆಗಳಿಗಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ಮಿಥುನ್ ರೈ ಯನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿ ಸಬೇಕಾಗಿದೆ ಎಂದು ಮತದಾರ ಬಾಂಧವರಲ್ಲಿ ನನ್ನ ವಿನಮ್ರ ವಿಜ್ಞಾಪನೆ ಮಾಡುವುದಾಗಿ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಮಾಧ್ಯಮಗಳ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.
ನಾನು ಪ್ರತಿನಿಧಿಸಿದ ಸಂದರ್ಭದಲ್ಲಿ ,ಮತ್ತು ಸೋತಾಗಲೂ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ; ಪಕ್ಷ ನನಗೆ ಅವಕಾಶ ನೀಡಿದೆ. ನನ್ನ ರಾಜಕೀಯ ಜೀವನದಲ್ಲಿ ಸತ್ಯ ಪ್ರಾಮಾಣಿಕತೆ ನಿಷ್ಕಳಂಕವಾಗಿ ಕಾರ್ಯನಿರ್ವಹಿಸಿ ಕೇಂದ್ರ ಸರಕಾರದ ಮಂತ್ರಿಯಾಗಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡನಾಗಿ ದೇಶದ ಸೇವೆ ಮಾಡುವ ಸೌಭಾಗ್ಯ ನನಗೆ ಕಾಂಗ್ರೆಸ್ ಪಕ್ಷ ನೀಡಿತ್ತು. ಕಾಂಗ್ರೆಸ್ ಪಕ್ಷ ಯಾವಗಲೂ ಸಾಮಾಜಿಕ ನ್ಯಾಯದ ಪರವಾಗಿದೆ. ನಾನು ಸೋತ ಸಂದರ್ಭದಲ್ಲಿ ಕೂಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಪದೇ ಪದೇ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶವನ್ನು ನನಗ ನೀಡಿತ್ತು. ಶಿಕ್ಷಣ ಉದ್ಯೋಗ ಮತ್ತು ರಾಜಕೀಯದಲ್ಲಿ ಅವಕಾಶಗಳನ್ನು ಪಡೆದು ಅಭಿವೃದ್ಧಿ ಯನ್ನು ಹೊಂದುತ್ತಿರುವ ಸಂಧರ್ಭದಲ್ಲಿ ಈ ಎಲ್ಲಾ ಕೆಲಸಗಳಿಗೆ ಪೂರಕವಾಗಿ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ ಸಂತೃಪ್ತಿ ನನಗೆ ಇದೆ. ಕಾಂಗ್ರೆಸ್ ಸಂಸದರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಅಭಿವೃದ್ಧಿ, ಎನ್ ಐ ಟಿ ಕೆ, ಎಂಸಿಎಫ್, ಎಂಆರ್ಪಿಎಲ್, ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಇತ್ಯಾದಿ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತ ಮಾಡಲಾಗಿತ್ತು. ಚುನಾವಣೆಯಲ್ಲಿ ಮಿಥುನ್ ರೈ ಗೆಲುವನ್ನು ಪಡೆಯುತ್ತಾರೆ ಎಂದು ನನಗೆ ದೇವರ ಪ್ರೇರಣೆ ಆಗಿರುತ್ತದೆ ಎಂದು ಮಾಜಿ ಕೇಂದ್ರ ವಿತ್ತ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಜಿಲ್ಲೆಯ ಶಾಂತಿ-ಸೌರ್ಹಾದ ವಾತವರಣಕ್ಕಾಗಿ ಕಾಂಗ್ರೆಸ್ನ್ನು ಬೆಂಬಲಿಸಿ:- ಇದು ಜಿಲ್ಲೆಯ ಶಾಂತಿ ಸಹಬಾಳ್ವೆಗೆ ಸಹೋದರ ಭಾವದೊಂದಿಗೆ ಸೌರ್ಹಾದತೆ ಯಿಂದ ಬದುಕುವ ವಾತಾವರಣ ನಿರ್ಮಾಣ ಕ್ಕೆ ಪೂರಕವಾಗುತ್ತದೆ. ಮಿಥುನ್ ರೈ ಒಬ್ಬ ಉತ್ತಮ ಅಭ್ಯರ್ಥಿ ಕೂಡ ಆಗಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಸುಶಿಕ್ಷಿತ, ಪದವೀಧರ ಅಭ್ಯರ್ಥಿಯನ್ನು ಕಾಂಗ್ರೆಸ್ ಈ ಬಾರಿ ನೀಡಿದೆ. ಲೋಕಸಭೆಯಲ್ಲಿ ಮುಂದುವರಿದ ಜಿಲ್ಲೆಯ ಜನರ ಧ್ವನಿ ಆಗಲು ಮಿಥುನ್ ರೈ ಅರ್ಹರಾಗಿದ್ದಾರೆ. ಆದುದರಿಂದ, ಪ್ರಜ್ಞಾವಂತ ಮತದಾರರಾದ ನೀವೆಲ್ಲರು ಮತದಾನದಲ್ಲಿ ಭಾಗವಹಿಸಿ ಮಿಥುನ್ ರೈ ಅವರ ಹಸ್ತದ ಗುರುತಿಗೆ ಮತ ಚಲಾಯಿಸಿ ಕಾಂಗ್ರೆಸ್ನ ವಿಜಯಕ್ಕೆ ಕಾರಣರಾಗಬೇಕೆಂದು ವಿನಯ ಪೂರ್ವಕವಾಗಿ ಮತದಾರರಲ್ಲಿ ವಿನಂತಿ ಮಾಡುವುದಾಗಿ ಜನಾರ್ದನ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.