ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ ರಾಈಸಾಳಿಗೆ ಎಸ್.ಐ.ಒ ವತಿಯಿಂದ ಅಭಿನಂದನಾ ಪತ್ರ
ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 592 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ರಾಈಸ ಅವರನ್ನು ಅಭಿನಂದಾನ ಪತ್ರ ನೀಡಿ ಎಸ್.ಐ.ಒ ಉಡುಪಿ ಜಿಲ್ಲಾ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಈಸ ಅವರ ತಾಯಿ ರುಕ್ಸಾನ, ಸಹೋದರ ಮಸ್ಕೂರ್, ರಾಜ್ಯ ಜನ ಸಂಪರ್ಕ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ಉಡುಪಿ ಜಿಲ್ಲಾಧ್ಯಕ್ಷರಾದ ಅಫ್ವಾನ್ ಹೂಡೆ, ಜಿಲ್ಲಾ ಕಾರ್ಯದರ್ಶಿ ಶಾರೂಕ್ ತೀರ್ಥಹಳ್ಳಿ, ಇದ್ರಿಸ್ ಹೂಡೆ, ಸಾಮಾಜಿಕ ಕಾರ್ಯಕರ್ತರು, ಶರೀಫ್ ಹೂಡೆ ಹಾಗು ಮುಹಮ್ಮದ್ ಝಕಿ ಉಪಸ್ಥಿತರಿದ್ದರು.
Next Story