ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಹೆಬ್ರಿ, ಎ.17: ವಿಪರೀತ ಕುಡಿತದ ಚಟದಿಂದ ಸರಿಯಾಗಿ ಕೆಲಸ ಹಾಗೂ ಕುಡಿಯಲು ಹಣ ಇಲ್ಲದೇ ಮಾನಸಿಕವಾಗಿ ನೊಂದು ಮಾ.31ರಂದು ರಾತ್ರಿ ಮನೆಯಲ್ಲಿ ಕಳೆನಾಶಕದ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಮುದ್ರಾಡಿ ಗ್ರಾಮದ ಬಲ್ಲಾಡಿಯ ಈಶ್ವರ ನಗರ ನಿವಾಸಿ ಉಮಾನಾಥ ಪ್ರಭು(60) ಎಂಬವರು ಎ.16ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ತೀರಿ ಹೋದ ಗಂಡ ಹಾಗೂ ಮಗನ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಬೈಂದೂರು ಕಳವಾಡಿ ನಿವಾಸಿ ಅಕ್ಕಯ್ಯ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.16ರಂದು ಮಧ್ಯಾಹ್ನ ವೇಳೆ ಮನೆಯ ರೂಮಿನ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story