ಬೋಳಿಯಾರ್ ಶಾಲೆಯಲ್ಲಿ ಯು.ಟಿ.ಖಾದರ್ ಮತದಾನ
ಕೊಣಾಜೆ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರ್ನ ರಂತಡ್ಕ ಸರ್ಕಾರಿ ಶಾಲೆಯ ಮತಗಟ್ಟೆ 103ರಲ್ಲಿ ಮತ ಚಲಾಯಿಸಿದರು.
ಈ ಸಂದರ್ಭ ಅವರ ಪತ್ನಿ ಜೊತೆ ಬೋಳಿಯಾರ್ ರಂತಡ್ಕದ ಮತಗಟ್ಟೆಗೆ ಆಗಮಿಸಿದ ಯು.ಟಿ.ಖಾದರ್ ಅವರು ಮತ ಚಲಾವಣೆ ಮಾಡಿದರು. ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಾದರ್ ಅವರು, ರಾಜ್ಯದಲ್ಲಿ ಜನತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸವಿದೆ. ಮಿಥುನ್ ರೈ ಉತ್ತಮ ಅಭ್ಯರ್ಥಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರು ಖಂಡಿತವಾಗಿಯೂ ಅವರಿಗೆ ಆಶೀರ್ವಾದ ಮಾಡಲಿದ್ದಾರೆ. ಬಿಜೆಪಿಯು ಕೇವಲ ಸುಳ್ಳು ಭರವಸೆ ಮತ್ತು ಜನರ ಭಾವನೆಗಳೊಂದಿಗೆ ಮತ ಯಾಚನೆ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಜನರ ಬದುಕಿಗೆ ಬೇಕಾದ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಜನರಿಂದ ಮತ ಪಡೆಯುತ್ತಿದೆ ಎಂದರು.
Next Story