ನೂತನ ವಧುವರರಿಂದ ಮತದಾನ
ಕಾರ್ಕಳ ತಾಲೂಕಿನ ಶ್ರೀಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರೀ ದೇವಳದ ಸಭಾಭವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ನೂತನ ವಧುವರರಾದ ಸಂದೀಪ್ ನಾಯಕ್ ಶಿರ್ವ ಮಟ್ಟಾರು ಯುಬಿಎಂಸಿ ಶಾಲೆಯ ಮತಗಟ್ಟೆಯಲ್ಲಿ ಹಾಗೂ ಮದುಮಗಳು ದಿವ್ಯಾ ನಾಯಕ್ ಹಿರ್ಗಾನದ ಮೂರೂರು ಬಿಎಂ ಶಾಲೆಯ ಮತಗಟ್ಟೆಯಲ್ಲಿ ಮತ ದಾನ ಮಾಡಿದರು. ವಿವಾಹ ಕಾರ್ಯ ಮುಗಿಸಿ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಇವರು ಚಲಾಯಿಸಿದರು.
ಉಡುಪಿ ಮಾರ್ಪಳ್ಳಿಯ ಶ್ರೀನಿವಾಸ ಶೆಟ್ಟಿಗಾರ್ ಅವರ ಪುತ್ರಿ ಶ್ವೇತಾ ಉಡುಪಿ ಖಾಸಗಿ ಹೊಟೇಲಿನಲ್ಲಿ ನಡೆದ ವಿವಾಹ ಕಾರ್ಯಕ್ರಮದ ಬಳಿಕ ತನ್ನ ಪತಿ ಬೆಂಗಳೂರಿನ ಶಶಿಕುಮಾರ್ ಜೊತೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊರಂಗ್ರಪಾಡಿ ಕೆಮ್ತೂರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
Next Story