ಎ. 24: ಅಖಿಲ ಭಾರತ ಬ್ಯಾರಿ ಪರಿಷತ್ ಮಹಾಸಭೆ
ಮಂಗಳೂರು, ಎ.19: ಅಖಿಲ ಭಾರತ ಬ್ಯಾರಿ ಪರಿಷತ್ನ ವಾರ್ಷಿಕ ಮಹಾಸಭೆಯು ಎ. 24ರಂದು ಮಧ್ಯಾಹ್ನ 3 ಗಂಟೆಗೆ ನಗರದ ಹ್ಯಾಮಿಲ್ಟನ್ ಬಳಿಯ ಕ್ಯಾಪಿಟಲ್ ಅವೆನ್ಯೂ ಕಟ್ಟಡದ ತಳ ಅಂತಸ್ಥಿನಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಧಾರ್ಮಿಕ ನೇತಾರರಿಂದ ನಮಾಝ್, ರಮಝಾನ್ ಮತ್ತು ಝಕಾತ್ ಬಗ್ಗೆ ತರಬೇತಿ ಏರ್ಪಡಿಸಲಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ಭಾಗವಹಿಸುವವರು ಎ.22ರೊಳಗಾಗಿ ಸದಸ್ಯತ್ವ ಶುಲ್ಕ ನೀಡಬೇಕು. ಜತೆಗೆ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9008503993ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story