ಜರ್ಮನ್ ಪ್ರಜೆಗಳಿಗೆ ಹಲ್ಲೆ : ಹಣ, ಮೊಬೈಲ್ ದರೋಡೆ
ಮಂಜೇಶ್ವರ: ಮಹಿಳೆ ಸಹಿತ ನಾಲ್ಕು ಮಂದಿ ಜರ್ಮನ್ ಪ್ರಜೆಗಳಿಗೆ ಹಲ್ಲೆ ಮಾಡಿ ಹಣ ಮತ್ತು ಮೊಬೈಲ್ ದರೋಡೆ ಮಾಡಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.
ಮಹಿಳೆ ಸಹಿತ ನಾಲ್ವರು ಜರ್ಮನ್ ಪ್ರಜೆಗಳು ಕೇರಳದ ವಿವಿಧ ಪ್ರದೇಶಗಳನ್ನು ಸಂದರ್ಶಿಸಿ ಮಂಜೇಶ್ವರಕ್ಕೆ ತಲುಪಿದ್ದರು. ಮಂಜೇಶ್ವರ ಚೆಕ್ ಪೋಸ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿ ಟೆಂಟ್ ನಿರ್ಮಿಸಿ ಎ.18 ರಂದು ರಾತ್ರಿ ನಿದ್ದೆ ಮಾಡಿದ್ದರು. ಮುಂಜಾನೆ 2 ಗಂಟೆಗೆ ಐದು ಮಂದಿಯ ತಂಡ ಇದರೊಳಗೆ ನುಗ್ಗಿ ಹಲ್ಲೆ ಮಾಡಿ ದರೋಡೆ ಮಾಡಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
Next Story