ದ.ಕ.ಜಿಲ್ಲೆಯ ಮೂರು ಸೌಹಾರ್ದ ಸಹಕಾರಿಗಳ ಸಮಾಪನೆ
ಮಂಗಳೂರು, ಎ.20: ದ.ಕ. ಜಿಲ್ಲೆಯಲ್ಲಿ ಜನರಕ್ಷಾ ಸೌಹಾರ್ದ ಸಹಕಾರಿ ನಿ. ಮಂಗಳೂರು, ಕರ್ನಾಟಕ ಅಭ್ಯುದಯ ಸೌಹಾರ್ದ ಸಹಕಾರಿ ನಿ. ಸುಳ್ಯ, ಶರ್ಮಹಾನ್ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ. ಪುತ್ತೂರು ಈ ಮೂರು ಸೌಹಾರ್ದ ಸಹಕಾರಿಗಳು ಬೈಲಾದ ಅನ್ವಯ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುತ್ತದೆ.
ಈ ಸಹಕಾರಿಗಳನ್ನು ಸಮಾಪನೆಗೊಳಿಸುವಂತೆ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿ. ಇದರ ವ್ಯವಸ್ಥಾಪಕ ನಿರ್ದೇಶಕರು ಶಿಫಾರಸ್ಸು ಮಾಡಿದ ಅನ್ವಯ ಸದರಿ ಸಹಕಾರಿಗಳನ್ನು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರ ಕಲಂ 48(5)ರ ಅನ್ವಯ ಸಮಾಪನೆಗೊಳಿಸಲಾಗುವುದು.
ಆಸಕ್ತ ಸದಸ್ಯರು ಸಹಕಾರಿಯನ್ನು ಪುನಃಶ್ಚೇತನಗೊಳಿಸಲು ಮುಂದಾದಲ್ಲಿ 15 ದಿನಗಳೊಳಗೆ ಸಹಕಾರಿಗಳ ಉಪ ನಿಬಂಧಕರು, ದ.ಕ.ಜಿಲ್ಲೆ, ಮಂಗಳೂರು ಇವರ ಕಚೇರಿಯನ್ನು ಸಂರ್ಪಕಿಸಬಹುದು. ಇಲ್ಲದಿದ್ದಲ್ಲಿ ಸದಸ್ಯರಿಗೆ ಸಹಕಾರಿಯನ್ನು ಮುನ್ನಡೆಸಲು ಯಾವುದೇ ಆಸಕ್ತಿ ಇಲ್ಲವೆಂದು ಪರಿಗಣಿಸಿ ಸಮಾಪನೆಗೊಳಿಸಲಾಗುವುದು ಎಂದು ದ.ಕ.ಜಿಲ್ಲಾ ಸಹಕಾರಿಗಳ ಉಪ ನಿಬಂಧಕರ ಪ್ರಕಟನೆ ತಿಳಿಸಿದೆ.
Next Story