ಚಿಣ್ಣರ ಚಿಲಿ ಪಿಲಿ: ಉಚಿತ ಬಾಲಪ್ರತಿಭಾ ಶಿಬಿರ ಉದ್ಘಾಟನೆ
ಮಂಗಳೂರು: ಹಳೇ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಡಶಾಲೆ ಹಾಗು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ಟಣ ಮಂಗಳೂರು ಇದರ ಆಶ್ರಯದಲ್ಲಿ ನಡೆಯುತ್ತಿರುವ 18ನೇ ವರ್ಷದ ಎಂಟು ದಿನಗಳ ಚಿಣ್ಣರ ಚಿಲಿಪಿಲಿ ಬಾಲ ಪ್ರತಿಭಾ ಶಿಬಿರವು ಡಾ. ಶಿವರಾಮ ಆರ್ಟ್ ಅಫ್ ಲಿವಿಂಗ್ ಇದರ ಉಪನ್ಯಾಸಕ ಉದ್ಘಾಟನೆ ಮಾಡಿದರು.
ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಧ್ಯಾಯಿನಿ ಜ್ಯೋಲಿಯಟ್ ಪಿಂಟೋ ಸಂಘದ ಮಾಜಿ ಅಧ್ಯಕ್ಷ ಅಜಿತ್ ಕುಮಾರ್, ಶಿಬಿರಾಧಿಕಾರಿ ಪ್ರಕಾಶ್ ನಾಯಕ್, ನವೀನ್ ಬೋಳುರ್, ವಿಜೇತ ರೋಷನ್, ಅಶ್ವಿಜ, ಜ್ಞಾನೇಶ ಹಾಗು ಇತರರು ಉಪಸ್ಥಿತರಿದ್ದರು.
ಸಂಘದ ಗೌರವ ಅಧ್ಯಕ್ಷ ಪ್ರವೀಣ್ ಕುಮಾರ್ ಸ್ವಾಗತಿಸಿ, ಪ್ರಸ್ಥಾವನೆಯನ್ನು ಮಾಡಿದರು. ಅಧ್ಯಕ್ಷ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.