ಎ.27ರಂದು ಉಡುಪಿಯ ಕೊಳಂಬೆಯಲ್ಲಿ ಸುನ್ನಿ ಇಜ್ತಿಮಾ
ಉಡುಪಿ, ಎ. 22: ಉಡುಪಿ ಜಿಲ್ಲಾ ಸುನ್ನಿ ದಾವತೇ ಇಸ್ಲಾಮೀ ವತಿಯಿಂದ ದ್ವಿತೀಯ ವರ್ಷದ ಸುನ್ನಿ ಇಜ್ತಿಮಾ ಕಾರ್ಯಕ್ರಮವು ಕೊಳಂಬೆ ಶಾಂತಿನಗರ ಮದೀನ ಮಸೀದಿಯಲ್ಲಿ ಎ. 27ರಂದು ಸಂಜೆ 5 ಗಂಟೆಗೆ ನಡೆಯಲಿದೆ.
ಅತಾಯೇ ಹುಜ್ಹೂರ್ ಮುಫ್ತಿಎ ಆಝಮ್ ಎ ಹಿಂದ್ (ವರ್ಲ್ಡ್ ಇಸ್ಲಾಮಿಕ್ ಮಿಶನ್ ಲಂಡನ್) ಅಲ್ಲಾಮ ಖಮರುಝ್ಝಮಾನ್ ಅಝ್ಮಿ, ಸುನ್ನಿ ದಾವತೇ ಇಸ್ಲಾಮಿಯ ಅಮೀರೆ ಅಲ್ಲಾಮ ಮೌಲಾನ ಮುಹಮ್ಮದ್ ಶಾಕಿರ್ ಅಲಿ ನೂರಿ ಮುಂಬೈ, ಅಜ್ಮೀರ್ ಶರೀಫ್ ಎಸ್ಡಿಐ ನಿಗ್ರಾ ಹಾಫಿಝ್ ಮುಹಮ್ಮದ್ ಮೋಯಿನುದ್ದೀನ್ ಖಾದ್ರಿ, ಹುಬ್ಬಳ್ಳಿ. ಎಸ್ಡಿಐ ಮುಬಲ್ಲಿಗ್ ನಾತ್ಖಾಃ ಮುಹಮ್ಮದ್ ಹುಸೈನ್ ಸಾಹಬ್ ಹಾಗೂ ಜಿಲ್ಲೆಯ ಅನೇಕ ಉಲಮಾ ಹಾಗೂ ಸಾದಾತುಗಳು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story