ಮಣಿಪಾಲ: ಉಚಿತ ತಪಾಸಣಾ, ಚಿಕಿತ್ಸಾ ಶಿಬಿರ
ಮಣಿಪಾಲ, ಎ. 22: ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶಾಲಾಕ್ಯ ತಂತ್ರ ವಿಭಾಗದ ವತಿಯಿಂದ ಆರು ದಿನಗಳ ಕಣ್ಣು, ಕಿವಿ, ಗಂಟಲು ಮೂಗು ಹಾಗೂ ಶಿರೋರೋಗಗಳ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ. ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಡಾ.ಗುರುರಾಜ ತಂತ್ರಿ, ಡಾ. ದಿನೇಶ್ ಜೆ.ನಾಯಕ್, ಡಾ.ನಿಶಿತಾ, ಡಾ.ಸಹನಾ ಹಾಗೂ ಆಡಳಿತಾಧಿಾರಿ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.
Next Story