ತಾಯಿ ಬುದ್ಧಿಮಾತು: ಸಿಟ್ಟಿನಿಂದ ಬಾಲಕಿ ಆತ್ಮಹತ್ಯೆ
ಕುಂದಾಪುರ, ಎ.22: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಾಲಕಿ ಯೊಬ್ಬಳು ತಾಯಿ ಬುದ್ದಿ ಮಾತಿನಿಂದ ವಿಪರೀತ ಸಿಟ್ಟು ಮಾಡಿಕೊಂಡು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.21ರಂದು ರಾತ್ರಿ ವೇಳೆ ವಡೇರಹೋಬಳಿ ಗ್ರಾಮದ ಟಿ.ಟಿ.ರೋಡ್ ಎಂಬಲ್ಲಿ ನಡೆದಿದೆ.
ಮೃತರನ್ನು ಟಿ.ಟಿ.ರೋಡ್ ನಿವಾಸಿ ಶ್ರಾವ್ಯ(17) ಎಂದು ಗುರುತಿಸಲಾಗಿದೆ. ಬಸ್ರೂರಿನ ಶಾರದಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿ ಕೊಂಡಿದ್ದ ಈಕೆ ತಂದೆ ತಾಯಿ ಬುದ್ದಿಮಾತು ಹೇಳಿದ್ದಕ್ಕೆ ಸಿಟ್ಟು ಮಾಡಿಕೊಂಡು ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.
ನಾಲ್ಕು ತಿಂಗಳ ಹಿಂದೆ ತಾಯಿ ಬುದ್ದಿಮಾತು ಹೇಳಿದ್ದಕ್ಕೆ ಬ್ಲೇಡಿನಿಂದ ಅವಳ ಕೈಯನ್ನು ಗೀರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಶ್ರಾವ್ಯ, ಮನೆಯ ಪಕ್ಕದ ಡೇನೀಸ್ ಡಿಸೋಜ ಎಂಬವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story