ಶತಾಯುಷಿ ಅಂಗಡಿಮಾರು ಚಂದ್ರಗಿರಿ ಕೃಷ್ಣಭಟ್ಗೆ ಸನ್ಮಾನ
ಮಂಗಳೂರು, ಎ. 22: ಭಾರತೀಯ ಕುಟುಂಬ ಪದ್ಧತಿಯನ್ನು ಸಾಕ್ಷಾತ್ಕಾರಗೊಳಿಸಿರುವ ಶತಾಯುಷಿ ಅಂಗಡಿಮಾರು ಚಂದ್ರಗಿರಿ ಕೃಷ್ಣ ಭಟ್ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಧರ್ಮ ಪ್ರಚಾರಕ್ಕಾಗಿ ತನ್ನ ಓವ ಪುತ್ರನನ್ನು ಪೇಜಾವರ ಮಠದ ಮೂಲಕ ಸಮಾಜಕ್ಕೆ ಅರ್ಪಿಸಿರುವ ಕೃಷ್ಣಭಟ್ ವೈದಿಕರಾಗಿ, ಕೃಷಿ ಕ್ಷೇತ್ರದಲ್ಲೂ ಅನುಭವಿಗಳಾಗಿ ದೀನ ದಲಿತರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು ಎಂದು ಪೇಜಾವರ ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥರು ನುಡಿದರು.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಭುವನಾಭಿರಾಮ ಉಡುಪ, ಕೊಳುವೈಲು ಗೋಪಾಲಕೃಷ್ಣ ರಾವ್, ದೇವಿ ಪ್ರಸಾದ್ ಪುನರೂರು ಉಪಸ್ಥಿತರಿದ್ದರು.
Next Story