ನಟ್ಟಿಬೈಲ್ ದರ್ಗಾ ಉರೂಸ್ ಸಮಾರಂಭ
ಉಪ್ಪಿನಂಗಡಿ: ಮಾಲಿಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧೀನದಲ್ಲಿರುವ ಇತಿಹಾಸ ಪ್ರಸಿದ್ಧ ನಟ್ಟಿಬೈಲು ದರ್ಗಾ ಶರೀಫ್ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶುಹದಾಗಳ ಸ್ಮರಣಾರ್ಥ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ನಟ್ಟಿಬೈಲ್ ದರ್ಗಾ ಉರೂಸ್ ಸಮಾರಂಭವು ಎ. 22ರಂದು ಜರಗಿತು.
ಗಂಡಿಬಾಗಿಲು ಜುಮಾ ಮಸೀದಿ ಖತೀಬ್ ಅನಸ್ ತಂಙಳ್ ದುವಾಃ ನೆರವೇರಿಸಿದರು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಫೈಝಿ ಮತ್ತು ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ "ಮೌಲಿದ್ ಪಾರಾಯಣ" ನಡೆಯಿತು. ಸಮಾರಂಭದಲ್ಲಿ ಮುಲ್ಕಿ ಜುಮಾ ಮಸೀದಿ ಖತೀಬ್ ಎಸ್.ಬಿ. ದಾರಿಮಿ, ಉಪ್ಪಿನಂಗಡಿ ಹಿಪ್ಲುಲ್ ಕಾಲೇಜು ಪ್ರಾಚಾರ್ಯ ಮಹಮ್ಮದ್ ತಹೀಬ್, ಅಶ್ರಫ್ ಹನೀಫಿ, ಹಳೇಗೇಟು ಮದ್ರಸದ ಉಸ್ಮಾನ್ ದಾರಿಮಿ, ಅಜೀಜ್ ಫೈಝಿ, ರಶೀದ್ ಮುಸ್ಲಿಯಾರ್, ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೆಜಾಲ್, ಯು.ಕೆ. ಅಯ್ಯೂಬ್ ಮೌಲೀದ್ ಪಾರಾಯಣದಲ್ಲಿ ಭಾಗವಹಿಸಿದ್ದರು.
ಮಾಲಿಕುದ್ದೀನಾರ್ ಜುಮ್ಮಾ ಮಸೀದಿ ಜೊತೆ ಕಾರ್ಯದರ್ಶಿ ಹೆಚ್. ಯೂಸುಫ್ ಹಾಜಿ, ಖಜಾಂಚಿ ಮಹಮ್ಮದ್ ಮುಸ್ತಫಾ, ಉಪಾಧ್ಯಕ್ಷ ಅಶ್ರಫ್ ಹಾಜಿ ಕರಾಯ, ಸಮಿತಿ ಸದಸ್ಯರುಗಳಾದ ಮಹಮ್ಮದ್ ಕೂಟೇಲು, ಬಿ.ಕೆ. ಹಮೀದ್, ಸಿದ್ದಿಕ್ ಕೆಂಪಿ, ಅಬ್ಬಾಸ್ ನಿನ್ನಿಕಲ್, ಹನೀಫ್ ಕಡವಿನಬಾಗಿಲು ಮತ್ತಿತರರು ಉಪಸ್ಥಿತರಿದ್ದರು.