ಮಂಗಳೂರು: ಸೌಹಾರ್ದತೆ ಭಾಷಣ, ವೇದಿಕೆಗಳಿಗೆ ಮಾತ್ರ ಸೀಮಿತವಾಗುತ್ತಿರುವ ಇವತ್ತಿನ ದಿನಗಳಲ್ಲಿ ಮಲ್ಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂದೂ ಯುವಕರು ಸಂದಲ್ ಮೆರವಣಿಗೆ ಮೂಲಕ ಉದ್ದಬೆಟ್ಟು ಮಸೀದಿಗೆ ಹೊರೆ ಕಾಣಿಕೆ ಅರ್ಪಿಸಿ ನೇರವಾಗಿ ಮಸೀದಿಗೆ ತೆರಳಿ ಧರ್ಮಗುರುಗಳ ಪ್ರಾರ್ಥನೆಯಲ್ಲಿ ಭಾಗವಹಿಸಿ ಸೌಹಾರ್ದತೆಗೆ ಹೊಸ ಭಾಷ್ಯ ಬರೆದಿದ್ದಾರೆ.