ಎ.25 ರಿಂದ ಅಮೆಮಾರ್ ಮಸೀದಿಯಲ್ಲಿ ದಾರ್ಮಿಕ ಮತ ಪ್ರವಚನ, ಬುರ್ದಾ ಕಾರ್ಯಕ್ರಮ
ಫರಂಗಿಪೇಟೆ, ಎ. 25: ಬದ್ರಿಯಾ ಮದರಸ ಮತ್ತು ಜುಮಾ ಮಸೀದಿ ಅಮೆಮಾರ್ ಇದರ ವತಿಯಿಂದ ಎ. 25 ರಿಂದ 28 ರವರೆಗೆ ನಾಲ್ಕು ದಿವಸಗಳ ಕಾಲ ದಾರ್ಮಿಕ ಮತಪ್ರವಚನ ಮತ್ತು ಬುರ್ದಾ, ಮಜ್ಲಿಸುನ್ನೂರು, ನಹತೇ ಶರೀಫ್ ಕಾರ್ಯಕ್ರಮ ಅಮೆಮಾರ್ ಮಸೀದಿ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ ವಹಿಸಲಿದ್ದಾರೆ, ಉದ್ಘಾಟನೆಯನ್ನು ಅಮೆಮಾರ್ ಮಸೀದಿ ಖತೀಬ್ ಅಬೂಸ್ವಾಲಿಹ್ ಪೈಝಿ ಮಾಡಲಿದ್ದಾರೆ, ಸದರ್ ಮುಅಲ್ಲಿಮ್ ಮುಹಿದ್ದೀನ್ ಅಲ್ ಹಸನಿ ಸ್ವಾಗತಿಸಲಿದ್ದು, ಹತ್ತನೇಮೈಲ್ ಕಲ್ಲು ಮಸೀದಿ ಖತೀಬ್ ಜಾಫರ್ ಬುಸ್ತಾನಿ ಕಾಸರಗೋಡ್ ಮುಖ್ಯ ಬಾಷಣ ಮಾಡಲಿದ್ದಾರೆ.
ಎ 26 ರಂದು ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, 27 ರಂದು ಅಶ್ಫಾರ್ ಪೈಝಿ ಪ್ರವಚನ ನೀಡಲಿದ್ದಾರೆ. 28 ರಂದು ಅಬೂಸ್ವಾಲಿಹ್ ಪೈಝಿಯವರ ನೇತೃತ್ವದಲ್ಲಿ ಮಜ್ಲಿಸುನ್ನೂರು ಮತ್ತು ಸಿರಾಜುದ್ದೀನ್ ಮದನಿ ಮತ್ತು ತಂಡದ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಮತ್ತು ಮಾಸ್ಟರ್ ಅಫೀಝ್ ರಿಂದ ನಹತೇ ಶರೀಫ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಸೀದಿ ಆಡಳಿತ ಸಮಿತಿ ಪ್ರ,ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.