ಮುಡಿಪು: ಮುತಅಲ್ಲಿಂ ಸಂಗಮ, ದುವಾ ಕಾನ್ಫರೆನ್ಸ್
ಕೊಣಾಜೆ: ಎಸ್ಸೆಸ್ಸೆಫ್ ಮುಡಿಪು ಘಟಕ ವತಿಯಿಂದ ಮುತಅಲ್ಲಿಂ ಸಂಗಮ ಹಾಗೂ ದುವಾ ಕಾನ್ಪರೆನ್ಸ್ ತೌಸಿಫ್ ಸಅದಿ ಹರೇಕಳ ಅಧ್ಯಕ್ಷತೆಯಲ್ಲಿ ಮಂಜನಾಡಿಯ ಅಲ್ ಮದೀನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅಲ್ ಮದೀನ ಮುದರ್ರಿಸ್ ಅಬ್ದುಲ್ ಸಲಾಂ ಅಹ್ಸನಿ ಉದ್ಘಾಟಿಸಿದರು. ಮಲಪ್ಪುರಂ, ಒದಕ್ಕುಂಙಳ್ ಅಹ್ಸನಿ, ಅಬ್ದುಲ್ಲಾ ಅಹ್ಸನಿ ಉಸ್ತಾದ್ ಹಾಗೂ ದ.ಕ.ಜಿಲ್ಲಾ ದುವಾ ಕನ್ವೀನರ್ ಮುನೀರ್ ಸಖಾಫಿ, ಅಬ್ದರ್ರಹ್ಮಾನಿ ಅಹ್ಸನಿ, ಬುಖಾರಿ ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು.
ಮುಡಿಪು ಘಟಕದ ಇಬ್ರಾಹಿಂ ಅಹ್ಸನಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.
Next Story