ಶ್ರೀನಿವಾಸ ಮಂಕುಡೆ-ಸಾಂತೂರು ಜಗನ್ನಾಥ ಶೆಟ್ಟಿಗೆ ಪ್ರಶಸ್ತಿ ಪ್ರದಾನ
ಮಂಗಳೂರು, ಎ.23: ಮಹಾರಾಷ್ಟ್ರದ ಸಾಂಗ್ಲಿ-ಮೀರಾಜ್ ತುಳುಭವನ ನಿರ್ಮಾಣದ ರೂವಾರಿಗಳಲ್ಲಿ ಓರ್ವರಾದ ತುಳು-ಕನ್ನಡ ಸಂಸ್ಕೃತಿಯನ್ನು ಹೊರ ರಾಜ್ಯಗಳಲ್ಲಿ ಪಸರಿಸಿದ ಹಿರಿಯ ಸಂಘಟಕ ಶ್ರೀನಿವಾಸ ಮಂಕುಡೆ ಅವರಿಗೆ ‘ಕಲ್ಕೂರ ಸಾಂಸ್ಕೃತಿಕ ಸಿರಿ’ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಉಡುಪಿ ತಾಲೂಕಿನ ಸಾಂತೂರು ಜಗನ್ನಾಥ ಶೆಟ್ಟಿಗೆ ‘ಕಲ್ಕೂರ ಯಕ್ಷ ಸಿರಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಗರದ ಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಡೆದ ಷುಕಣಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸನ್ಮಾನಿತರನ್ನು ಅಭಿನಂದಿಸಿದರು.
ಕರ್ಣಾಟಕ ಬ್ಯಾಂಕ್ನ ಅಧ್ಯಕ್ಷ ಜಯರಾಮ ಭಟ್, ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ನಿರ್ದೇಶಕರಾದ ಕೆ.ಎಸ್, ಕಲ್ಲೂರಾಯ, ಎಚ್, ಸೀತಾರಾಮ ಆಚಾರ್ಯ, ವಿನೋದ ಕಲ್ಕೂರಾ, ರತ್ನಾಕರ ಜೈನ್, ಜಯಲಕ್ಷ್ಮು ಶೆಟ್ಟಿ ಬಿ. ಉಪಸ್ಥಿತರಿದ್ದರು.
ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಹಂದೆ ವಂದಿಸಿದರು. ಸುಧಾಕರ ರಾವ್ ಪೇಜಾವರ ಸನ್ಮಾನ ಪತ್ರ ವಾಚಿಸಿದರು.