ತುರ್ತು ಸಂದರ್ಭದಲ್ಲಿ ಸನ್ನದ್ದರಾಗಿರಿ: ಕರಾವಳಿ ಕಾವಲು ಪೊಲೀಸ್ಗೆ ಸೂಚನೆ
ಉಡುಪಿ, ಎ. 26: ಇತ್ತೀಚಿನ ದಿನಗಳಲ್ಲಿ ಉದ್ಭವಿಸಿರುವ ಆತಂಕದ ಪರಿಸ್ಥಿತಿ ಹಿನ್ನಲೆಯಲ್ಲಿ, ಕರಾವಳಿ ಕಾವಲು ಪೊಲೀಸರು ಸಮುದ್ರ ಗಸ್ತು ತೀವ್ರ ಗೊಳಿಸಿ ದ್ದಾರೆ. ಈ ಹಿನ್ನಲೆಯಲ್ಲಿ ಐಎಸ್ಡಿ ಡಿಜಿಪಿ ಎ.ಎಂ.ಪ್ರಸಾದ್ ಹಾಗೂ ಬೆಂಗಳೂರು ಐಎಸ್ಡಿ ಎಡಿಜಿಪಿ ಸಿ.ಹೆಚ್ ಪ್ರತಾಪರೆಡ್ಡಿ ಅವರು ಇತ್ತೀಚೆಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದರು.
ಪಶ್ಚಿಮ ಕರಾವಳಿ ಸಮುದ್ರದಲ್ಲಿ ಇಂಟರ್ಸೆಪ್ಟರ್ ಬೋಟ್ನಲ್ಲಿ ಪೆಟ್ರೋಲಿಂಗ್ ಮಾಡಿದ ಅವರು, ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ, ಕರಾವಳಿ ಕಾವಲು ಪೊಲೀಸ್ಪಡೆಯಿಂದ ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದ ತನಕ ಬಿಗಿ ದ್ರತೆ, ಸಮುದ್ರ ತೀರದ ಆಯಾಕಟ್ಟಿನ ಸ್ಥಳಗಳಲ್ಲಿ ಗಸ್ತು ಆರಂಭಿಸಿ, ಯಾವುದೇ ತುರ್ತು ಸಂದರ್ಭದಲ್ಲಿ ಸನ್ನದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿಎಸ್ಪಿ ಪೊಲೀಸ್ ಅಧೀಕ್ಷಕ ಎನ್.ಟಿ. ಪ್ರಮೋದ್ ರಾವ್, ಪೊಲೀಸ್ ಉಪಾಧೀಕ್ಷಕ ಪ್ರವೀಣ್ ಹೆಚ್ ನಾಯಕ್ ಹಾಗೂ ಎಲ್ಲಾ ಒಂಭತ್ತು ಸಿಎಸ್ಪಿ ಠಾಣೆಯ ಠಾಣಾಧಿಕಾರಿಗಳು ಹಾಜರಿದ್ದರು.
Next Story