ಸಂಶೋಧನೆಗಳು ಸಮಾಜದ ಅಭಿವೃದ್ಧಿಗೆ ಪೂರಕ: ಡಾ.ಕೃಷ್ಣಚಂದ್ರ ಗೌಡ
ರಾಷ್ಟ್ರೀಯ ಸಮ್ಮೇಳ ‘ಎನ್ಸಿಇಟಿಎಸ್ಇ-2019’ ಸಮಾರೋಪ
ಶಿರ್ವ, ಎ.27: ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದೇ ವಿಭಾಗದ ವೃತ್ತಿಪರರಿ ಗಿಂತ ಅಂತರ್ವಿಭಾಗೀಯ ವೃತ್ತಿಪರರಿಗೆ ಬೇಡಿಕೆ ಇದ್ದು, ವಿದ್ಯಾರ್ಥಿಗಳು ಅಂತರ್ವಿಭಾಗೀಯವಾದ ಕ್ಷೇತ್ರಗಳಲ್ಲಿ ಸಂಶೋಧನೆಯ ಬಗ್ಗೆ ಗಮನಹರಿಸ ಬೇಕು. ಇಂತಹ ಸಂಶೋಧನಾ ಕಾರ್ಯಗಳು ಸಮಾಜದ ಅಭಿವೃದ್ಧಿಗೆ ಪೂರಕ ವಾಗಲಿವೆ ಎಂದು ಬೆಂಗಳೂರಿನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಕೃಷ್ಣಚಂದ್ರ ಗೌಡ ಹೇಳಿದ್ದಾರೆ.
ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವತಿ ಯಿಂದ ಸಂಸ್ಥೆಯ ಆವರಣದಲ್ಲಿ ಇಂದು ನಡೆದ ‘ಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು’ ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ‘ಎನ್ಸಿಇಟಿಎಸ್ಇ-2019’ರ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ನಡಾವಳಿಗಳ ಸಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಯುವ ಸಮೂಹಕ್ಕೆ ಉತ್ತಮ ತಾಂತ್ರಿಕ ಮಾರ್ಗದರ್ಶನ ನೀಡುವುದು ಇಂದಿನ ಅಗತ್ಯವಾಗಿದೆ. ತಾಂತ್ರಿಕ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಡಾಟಾ ಅನಾಲಿಟಿಕ್ಸ್, ಡಾಟಾ ಸೈನ್ಸ್ ಬಿಗ್ ಡಾಟಾ ಮುಂತಾದ ಕ್ಷೇತ್ರಗಳು ಕೇವಲ ಗಣಕಯಂತ್ರ ವಿಭಾಗಕ್ಕೆ ಮಾತ್ರ ಸೀಮಿತವಾಗಿರದೆ, ಎಲ್ಲಾ ಕ್ಷೇತ್ರಗಳ ವೃತ್ತಿಪರರಿಗೆ ಅವಕಾಶಗಳನ್ನು ಉತ್ತಮ ಭವಿಷ್ಯದ ಅವಕಾಶಗಳನ್ನು ತೆರೆದಿವೆ ಎಂದು ಅವರು ತಿಳಿಸಿದರು.
ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ರತ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸಂಯೋಜಕ ಪ್ರೊ.ಆನಂದ್ ವಿ.ಆರ್. ವರದಿಯನ್ನು ಮಂಡಿಸಿದರು. ಆಯೋಜಕ ಸುಜಯ್ ರಾಘವೇಂದ್ರ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಪ್ರೊ.ಡಾ.ವಾಸುದೇವ ವಂದಿಸಿದರು. ಸೌಮ್ಯ ಎಸ್. ಕಾರ್ಯಕ್ರಮ ನಿರೂಪಿಸಿದರು.