ಪಾವೂರು ಬದ್ರಿಯಾ ನಗರದಲ್ಲಿ ನೀರಿನ ಪೂರೈಕೆಗೆ ಆಗ್ರಹ
ಪಾವೂರು, ಎ. 29: ಗ್ರಾಮದ ಬದ್ರಿಯಾನಗರ-ಇಸ್ಲಾಹಿ ನಗರದಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದ್ದು, ಪಂಚಾಯತ್ ಆಡಳಿತವು ಶೀಘ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸೋಮವಾರ ಪಿಡಿಒ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ ಸ್ಥಳೀಯರು ನೀರಿನ ಅಸಮರ್ಪಕ ಪೂರೈಕೆಯಿಂದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಹಾಗಾಗಿ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರ ಮನವಿ ಸ್ವೀಕರಿಸಿದ ಪಿಡಿಒ ತಾತ್ಕಾಲಿಕ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಆದರೆ, ನಾಗರಿಕರು ಮೇ 2ರೊಳಗೆ ಶಾಶ್ವತ ನೀರಿನ ಪೂರೈಕೆ ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಸಲೀಂ, ರಫೀಕ್, ಹನೀಫ್, ಬಾವಾಕ, ಸಿರಾಜ್, ಸಮದ್, ಹಾರಿಸ್ ಮಲಾರ್ ಮತ್ತಿತರರು ಪಾಲ್ಗೊಂಡಿದ್ದರು.
Next Story