ಅಳೇಕಲ: ಉಚಿತ ಸಾಮೂಹಿಕ ವಿವಾಹ
ಉಳ್ಳಾಲ, ಎ. 29: ಭೂಲೋಕ ಎಂದರೆ ಸುಖದಲ್ಲಿ ಜೀವಿಸುವಂತಹದ್ದಲ್ಲ. ಪರಲೋಕದಲ್ಲೂ ವಿಜಯ ಸಾಧಿಸುವ ನಿಟ್ಟಿನಲ್ಲಿ ನೊಂದವರ ಕಣ್ಣೀರು ಒರೆಸುವ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಉಳ್ಳಾಲದ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು.
ಉಳ್ಳಾಲ ಅಲೇಕಳದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ನ ಆಶ್ರಯದಲ್ಲಿ ಮುಕ್ಕಚ್ಚೇರಿ ರಾಯಲ್ ಗಾರ್ಡನ್ನಲ್ಲಿ ಸೋಮವಾರ ನಡೆದ ಐದು ಜೋಡಿ ಉಚಿತ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಮದನಿ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ದುಆ ನೆರವೇರಿಸಿದರು.
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಮಾಜಿ ಮೇಯರ್ ಕೆ.ಅಶ್ರಫ್, ಪತ್ರಕರ್ತ ವಿದ್ಯಾಧರ್ ಶೆಟ್ಟಿ, ಉಳ್ಳಾಲ ನಗರಸಭೆಯ ಸದಸ್ಯರಾದ ಯು.ಎ. ಇಸ್ಮಾಯಿಲ್, ಅಝ್ಗರ್ ಅಲಿ, ಜಬ್ಬಾರ್, ಯು.ಪಿ.ಐಯೂಬ್ ಮಂಚಿಲ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಸೈಯದ್ ಮದನಿ ದಅ್ವಾ ಕಾಲೇಜಿನ ಪ್ರಾಂಶುಪಾಲ ಝೈನ್ ಸಖಾಫಿ ಉಸ್ತಾದ್, ದರ್ಗಾ ಸಮಿತಿಯ ಉಪಾಧ್ಯಕ್ಷ ಯು. ಎಸ್.ಹನೀಫ್, ಎನ್.ಎ. ಮಹಮೂದ್, ಯು.ಪಿ.ಹಮೀದ್, ಯು.ಎಂ.ಜಬ್ಬಾರ್, ಎಚ್.ಸಿದ್ದೀಖ್, ಯು.ಬಿ. ಇಬ್ರಾಹೀಂ ಮುಂತಾದವರು ಉಪಸ್ಥಿತರಿದ್ದರು.
ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಎ.ಎಂ.ಮುಹಮ್ಮದ್ ವರದಿ ವಾಚಿಸಿದರು.