ರಸ್ತೆ ಅಗಲೀಕರಣಕ್ಕೆ ಮೊದಲೇ ನಾಮಫಲಕ ಅಳವಡಿಕೆ !
ಉಡುಪಿ, ಎ.29: ಪರ್ಕಳ ಸಿಂಡಿಕೇಟ್ ಬ್ಯಾಂಕ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸುವ ಮೊದಲೇ ದಾರಿ ಸೂಚಕ ನಾಮಫಲಕ ಗಳನ್ನು ಅಳವಡಿಸಿರುವ ಕ್ರವುವನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ.
ಮೊದಲ ಹಂತದ ಕಾಮಗಾರಿಯಂತೆ ರಸ್ತೆಯನ್ನು ಮಣ್ಣು ತುಂಬಿಸಿ ಸಮತಟ್ಟು ಗೊಳಿಸಿ ಅಗಲಗೊಳಿಸಬೇಕಾಗಿದ್ದು, ಇಲ್ಲಿ ಕಾಮಗಾರಿ ಆರಂಭಿಸುವ ಬದಲು ಈಗಿರುವ ರಸ್ತೆಯ ಇಕ್ಕೆಲಗಳಲ್ಲಿಯೇ ನಾಮಫಲಕಗಳನ್ನು ಆಳವಡಿಸಲಾಗಿದೆ.
ದೂರದ ಊರುಗಳಾದ ಹೆಬ್ರಿ, ತೀರ್ಥಹಳ್ಳಿ, ಧರ್ಮಸ್ಥಳಕ್ಕೆ ದಾರಿ ಸೂಚಿ ಸುವ ನಾಮಫಲಕ ಹಾಕಿರುವುದು ಸ್ವಾಗತಾರ್ಹ. ಆದರೆ ಇನ್ನು ಕಾಮಗಾರಿ ಪೂರ್ಣಗೊಳ್ಳದೆ ನಾಮಫಲಕವನ್ನು ಹೊಸದಾಗಿ ನಿರ್ಮಾಣವಾಗಬೇಕಾದ ರಸ್ತೆಯ ಮಧ್ಯ ಜಾಗದಲ್ಲಿಯೇ ಅಳವಡಿಸಿರುವುದು ಇಲ್ಲಿ ರಸ್ತೆ ಅಗಲೀಕರಣ ಗೊಳಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆಯೇ? ಈಗಾಗಲೇ ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿ ನಾಮಫಲಕ ಅಳವಡಿಸದೆ ಇನ್ನೂ ಕಾಮಗಾರಿ ಆರಂಭಗೊಳ್ಳದ ಪರ್ಕಳದಲ್ಲಿ ಅಳವಡಿಸಿರುವುದು ಸಾಕಷ್ಟು ಗೊಂದಲಕ್ಕೆ ಕಾರಣ ವಾಗಿದೆ ಎಂದು ಸ್ಥಳೀಯರಾದ ಗಣೇಶ್ರಾಜ್ ಸರಳಬೆಟ್ಟು ತಿಳಿಸಿದ್ದಾರೆ.