ಮಾನಸಿಕ ತೊಂದರೆ ಕುರಿತ ಆಯುರ್ವೇದ ಚಿಕಿತ್ಸಾ ಶಿಬಿರ
ಉಡುಪಿ, ಎ.29: ಅನಿದ್ರೆ, ಉದ್ವೇಗ, ಖಿನ್ನತೆ, ಚಿತ್ತಚಂಚಲತೆ, ಮಾನಸಿಕ ಒತ್ತಡದ ತಲೆನೋವು ಹಾಗೂ ಇನ್ನಿತರ ಮಾನಸಿಕ ತೊಂದರೆಗಳ ಆಯುರ್ವೇದ ಚಿಕಿತ್ಸಾ ಶಿಬಿರವು ಉಡುಪಿಯ ಪ್ರಧಾನ ಅಂಚೆ ಕಛೇರಿ ಬಳಿಯ ವಿದ್ಯಾ ಪೂರ್ಣ ಸಂಕೀರ್ಣದ ಖುಷಿ ಆಯುರ್ಕೇರ್ನಲ್ಲಿ ರವಿವಾರ ಜರಗಿತು.
ಶಿಬಿರವನ್ನು ಉದ್ಘಾಟಿಸಿದ ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಮಾತನಾಡಿ, ಸಂಶೊಧನೆಗಳಿಂದ ದೃಢಪಟ್ಟಿರುವ ಆಯು ರ್ವೇದ ಚಿಕಿತ್ಸೆಗಳಿಂದ ಮಾನಸಿಕ ತೊಂದರೆಗಳಿಗೆ ಉತ್ತಮ ಪರಿಹಾರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಇಂಡಿಯನ್ ಆಯುರ್ವೇದ ಫಾರ್ಮಸಿಯ ಡಾ.ವಿಶ್ವಜಿತ್ ಮಾತನಾಡಿ, ಆರಂಭಿಕ ಹಂತದ ಹಾಗೂ ದೀರ್ಘಕಾಲೀನ ಚಿಕಿತ್ಸೆಗಳಿಗೆ ಜನರು ಆಯು ರ್ವೇದಕ್ಕೆ ಆಧ್ಯತೆ ನೀಡುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರದ ಸಂಯೊಜಕ ಡಾ.ವಿಜಯೇಂದ್ರ ಭಟ್ ಉಪಸ್ಥಿತರಿದ್ದರು.
Next Story