ಮನುವಾದಿಗಳಿಂದ ಅಂಬೇಡ್ಕರ್ ರಥವನ್ನು ಹಿಂದಕ್ಕೆ ತಳ್ಳುವ ಹುನ್ನಾರ: ಶೇಖರ್ ಹಾವಂಜೆ
ಉಡುಪಿ, ಎ.29: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಮತ್ತು ದಸಂಸ ಭೀಮವಾದ ಉಡುಪಿ ಜಿಲ್ಲೆ ಇದರ ವತಿಯಿಂದ ಸಂವಿಧಾನ ಶಿಲ್ಪಿಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 128ನೆ ಜನ್ಮ ದಿನಾಚರಣೆ ಯನ್ನು ರವಿವಾರ ವರಂಗ ಗ್ರಾಮದ ಒಳಗುಡ್ಡೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಸಂಸ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಮಾತನಾಡಿ, ಬಿಜೆಪಿ ಹಾಗೂ ಮನುವಾದಿ ಗಳು ಅಂಬೇಡ್ಕರ್ ಎಳೆದಂತಹ ರಥವನ್ನು ಹಿಂದೆ ತಳ್ಳುವ ಕೆಲಸ ಮಾಡುತ್ತಿ ದ್ದಾರೆ. ದೇವಸ್ಥಾನ, ಗುಡಿಗಳನ್ನು ತಿರುಗುವುದನ್ನು ಬಿಟ್ಟು ಗ್ರಂಥಾಲಯಗಳಿಗೆ ಭೇಟಿ ನೀಡಿದರೆ ಈ ದೇಶ ಉದ್ಧಾರವಾಗುತ್ತದೆ. ದೇವಸ್ಥಾನಕ್ಕೆ ಹಾಕುವ ಹಣವನ್ನು ಪುಸ್ತಕಕ್ಕೆ ನೀಡಿದರೆ ಹಲವು ಮಂದಿ ವಿದ್ಯಾವಂರಾಗುತ್ತಿದ್ದರು ಎಂದು ಹೇಳಿದರು.
ದಲಿತರು ಇಂದು ವೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಮನುವಾದಿಗಳು ದಲಿತ ಜನಾಂಗಕ್ಕೆ ಮಾಡುತ್ತಿರುವ ಶೋಷಣೆಗಳ ವಿರುದ್ಧವಾಗಿ ನಾವೆಲ್ಲ ಒಂದಾಗಿ ಹೋರಾಟ ನಡೆಸಬೇಕು. ಈ ದೇಶದ ರಾಜ ಕೀಯ ಅಸ್ತಿತ್ವವನ್ನು ದಲಿತರು ಪಡೆದುಕೊಂಡರೆ ಮಾತ್ರ ದಲಿತ ಜನಾಂಗ ಉದ್ಧಾರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ್ ಬೆಳ್ಳಂಪಳ್ಳಿ ಮಾತನಾಡಿ, ಅಂಬೇಡ್ಕರ್ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದುದು ನಮ್ಮ ಎಲ್ಲರ ಕರ್ತವ್ಯವಾಗಿದೆ. ಮತ ದಾನದ ಹಕ್ಕು ಎಂಬುದು ನಾವು ಈ ದೇಶದಲ್ಲಿ ಬದುಕಿದ್ದೇವೆ ಎಂಬುದರ ಪ್ರತೀಕವಾಗಿದೆ. ನಮಗೆ ಮತದಾನದ ಹಕ್ಕು ನೀಡಿದರು ಅಂಬೇಡ್ಕರ್ ಎಂದು ತಿಳಿಸಿದರು.
ಜಗನ್ನಾಥ ಚಟ್ಟಿಲ್ಪಾದೆ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.