ಮೀನುಗಾರಿಕೆ ವೇಳೆ ಅನುಮಾನಾಸ್ಪದ ಸಾವು: ದೂರು
ಕೋಟ, ಎ.30: ಸಮುದ್ರದಲ್ಲಿ ಮೀನುಗಾರಿಕೆ ವೇಳೆ ತಮಿಳುನಾಡು ಮೂಲದ ಶೇಖ್ ದಾವೂದ್(48) ಎಂಬವರು ಅನುಮಾನಾಸ್ಪದವಾಗಿ ಮೃತ ಪಟ್ಟಿರುವ ಬಗ್ಗೆ ಮೃತರ ಸಂಬಂಧಿಕ ಎಸ್.ಸೀನಿ ಅವುಲ್ ಮರೈಕಾಯರ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೇಖ್ ದಾವೂದ್ ಎ.24ರಂದು ಶ್ರೀ ಸನ್ನಿಧಿ ಬೋಟಿನಲ್ಲಿ 9 ಜನರ ಮೀನು ಗಾರರ ಜೊತೆಯಲ್ಲಿ ಮೀನುಗಾರಿಕೆಗಾಗಿ ಮಲ್ಪೆಯಿಂದ ಹೊರಟಿದ್ದರು. ಮೀನುಗಾರಿಕೆ ನಡೆಸಿ ವಾಪಾಸು ಬರುವಾಗ ಶೇಖ್ ದಾವೂದ್ ನಾಪತ್ತೆಯಾಗಿ ದ್ದರು. ಎ.30ರಂದು ಕೋಡಿಕನ್ಯಾನ ಗ್ರಾಮದ ಸಮುದ್ರ ತೀರದಲ್ಲಿ ಶೇಖ್ ದಾವೂದ್ ಮೃತದೇಹವು ಪತ್ತೆಯಾಗಿತ್ತು. ಶೇಖ್ ದಾವೂದ್ ಮರಣದ ಬಗ್ಗೆ ಸಂಶುವಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story