ಮರಾಠಿ ಸಮಾಜ ಸೇವಾ ಸಂಘ, ಚಾರಿಟೇಬಲ್ ಟ್ರಸ್ಟ್, ಮಹಿಳಾ ವೇದಿಕೆ ಉದ್ಘಾಟನೆ
ಮೂಡುಬಿದಿರೆ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮರಾಠಿ ಸಮಾಜ ಸೇವಾ ಸಂಘ (ರಿ), ಮರಾಟಿ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಮರಾಠಿ ಮಹಿಳಾ ವೇದಿಕೆ(ರಿ)ಯನ್ನು ಬೆಂಗಳೂರಿನ ಉಪ ಕಾರ್ಮಿಕ ಆಯುಕ್ತರಾದ ಡಾ/ಬಾಲಕೃಷ್ಣ ಸಿ.ಹೆಚ್. ಅವರು ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ರವಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮರಾಠಿ ಸಮಾಜದ ಜನರು ಒಂದಲ್ಲ ಒಂದು ರೀತಿಯಲ್ಲಿ ಸರಕಾರದಿಂದ ಮೀಸಲಾತಿಯನ್ನು ಪಡೆದುಕೊಂಡು ಬಂದಿದ್ದಾರೆ. ಹಿಂದೆ ಮರಾಠಿ ಸಮುದಾಯದಲ್ಲಿ ಸಂಘಟನೆ ಮಾಡುವ ಜನರ ಸಂಖ್ಯೆಯ ಕೊರತೆಯಿತ್ತು ಮತ್ತು ಸ್ವಹಿತದ ಬಗ್ಗೆ ಚಿಂತನೆ ಮಾಡುವ ಮನಸ್ಥಿತಿ ಮಾತ್ರ ಇತ್ತು. ಆದರೆ ಇಂದು ಸಮಾಜದ ಜನರ ಶ್ರೇಯೋಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಈ ಮೂಲಕ ಇದೀಗ ಪಡೆದುಕೊಳ್ಳುತ್ತಿರುವ ಶೇ ಮೂರೂವರೆ ಮೀಸಲಾತಿಯನ್ನು ಶೇ. ಏಳೂವರೆಗೆ ಏರಿಸುವಂತೆ ಸಂಘಟನೆಯ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ರೂಪದರ್ಶಿ ಡಾ.ಪ್ರಿಯಾ ಕೆ.ಎಸ್. ಮಹಿಳಾ ಸಂಘವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ತಮ್ಮಲ್ಲಿರುವ ಕೀಳರಿಮೆ, ಅಂಜಿಕೆ ಸ್ವಭಾವ ಬಿಟ್ಟು ಸಮಾಜಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಲ್ಲಿ ಪುರುಷ ಪ್ರಾಧಾನ ಸಮಾಜವನ್ನು ಹೋಗಲಾಡಿಸಿ ಸಮಾನವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಯುವ ಪೀಳಿಗೆ ಸಹವಾಸ ದೋಷದಿಂದ ಹಾದಿ ತಪ್ಪುತ್ತಿದ್ದು ಯುವಕ-ಯುವತಿಯರು ಸಂಘಟನೆಗಳಲ್ಲಿ ತೊಡಗಿಸಿಕೊಂಡಲ್ಲಿ ಯುವ ಪೀಳಿಗೆಯೂ ಸರಿದಾರಿಗೆ ಬರುತ್ತದೆ, ಸಂಘಟನೆಗಳು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆ ಮಾಚಿ ಸಾಂಘಿಕ ಒಗ್ಗಟ್ಟನ್ನು ಪ್ರದರ್ಶಿಸಬೇಕು ಜೀವನದಲ್ಲಿ ಸಾಧನೆಗಾಗಿ ಹಲವು ಗುಣಗಳನ್ನು ಕ್ರೋಢಿಕರಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ಕಾರ್ಕಳ ಅಂಬಾಭವಾನಿ ದೇವಸ್ಥಾನದ ಅಧ್ಯಕ್ಷ ಮಾಧವ ನಾಯ್ಕ್ ಮರಾಠಿ ಚಾರಿಟೇಬಲ್ ಟ್ರಸ್ಟ್(ರಿ)ನ್ನು ಉದ್ಘಾಟಿಸಿದರು. ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಸುಂದರ ನಾಯ್ಕ್ ಸಂಘದ ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮಾಜಿ ಮಾಜಿವ ಕೆ.ಅಭಯಚಂದ್ರ ಜೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜನರು ಸುಶಿಕ್ಷಿತರಾಗಬೇಕೆಂದು ಅಂಬೇಡ್ಕರ್ ಅವರು ಸಂವಿಂಧಾನದಲ್ಲಿ ಮೀಸಲಾತಿಯನ್ನು ತಂದರು. ತಾವು ಪಡೆದುಕೊಳ್ಳುತ್ತಿರುವ ಮೂಸಲಾತಿಗಿಂದ ಶೇ ಏಳೂವರೆಗೆ ಏರಿಸುವ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ಈಗಾಗಲೇ ಬಂದಿದೆ ಅವರು ಕ್ರಮಕೈಗಳ್ಳುವ ಭರವಸೆಯನ್ನು ನೀಡಿದ್ದಾರೆಂದು ತಿಳಿಸಿದರು.
ಮರಾಠಿ ಸಮಾಜ ಸೇವಾ ಸಂಘ ಮೂಡುಬಿದಿರೆ ಇದರ ಅಧ್ಯಕ್ಷ ರಾಮಚಂದ್ರ ಕೆಂಬಾರೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಸನ್ಮಾನ : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ/ಪ್ರಿಯಾ ಕೆ.ಎಸ್, ಎಸ್.ಎಸ್.ನಾಯ್ಕ್ ಮತ್ತು ಶಂಕರ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ/ಕೇರಳ ಫೆಡರೇಶನ್(ರಿ)ನ ಅಧ್ಯಕ್ಷ ಟಿ.ಸುಬ್ರಾಯ ನಾಯ್ಕ್, ರಾಜ್ಯ ಮರಾಟಿ ಯುವ ವೇದಿಕೆಯ ಅಧ್ಯಕ್ಷ ದಿನೇಶ್ ಬಾಬುಮೂಲೆ, ಎಸ್ಡಿಎಂ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಚೈತ್ರ ಕುಮಾರಿ ಎ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೂಡುಬಿದಿರೆ ಮರಾಟಿ ಚಾರಿಟೇಬಲ್ ಟ್ರಸ್ಟ್(ರಿ)ನ ಅಧ್ಯಕ್ಷ ಸದಾನಂದ ನಾಯ್ಕ್, ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಭಾ ವಿ.ನಾಯ್ಕ್ ಉಪಸ್ಥಿತರಿದ್ದರು.
ಎಸ್.ಎಸ್.ನಾಯ್ಕ್ ಸ್ವಾಗತಿಸಿದರು. ಉಪನ್ಯಾಸಕ ಪ್ರಕಾಶ್ ನಾಯ್ಕ್ ಮತ್ತು ಶಿಕ್ಷಕ ಶಂಕರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಮಹಾಲಿಂಗ ನಾಯ್ಕ್ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಮತ್ತು ನಂತರ ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡಿತು.